Site icon Vistara News

Astrology Answers : ಮಾಡಿದ ಸಾಲ ತೀರಿಸಲಾಗುತ್ತಿಲ್ಲ, ಏನು ಮಾಡುವುದು ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಕೈಯಲ್ಲಿ ಹಣ ಉಳಿಯುವುದಿಲ್ಲ. ಮಾಡಿದ ಸಾಲ ತೀರಿಸಲು ಆಗುತ್ತಿಲ್ಲ. ಪರಿಹಾರ ತಿಳಿಸಿ ಗುರೂಜಿ.
ರಾಶಿ: ತುಲಾ ನಕ್ಷತ್ರ: ವಿಶಾಖ

ಪರಿಹಾರ: ಪಂಚಮದಲ್ಲಿ ಶನಿಯಿದ್ದರೂ ತುಲಾ ರಾಶಿಯವರಿಗೆ ಶನಿಯ ಉಚ್ಚ ಸ್ಥಾನ ತುಲಾ ರಾಶಿಯೇ. ಆದರೆ ಶನಿ ಸ್ವಂತ ಮನೆಯಲ್ಲಿ ಇರುವುದರಿಂದ ಧೈರ್ಯ, ಕೀರ್ತಿ, ಲಾಭ ಕೊಡುತ್ತಾನೆ. ಧರ್ಮ ಕರ್ಮಾಚರಣೆಯನ್ನು ನೀವು ಸರಿಯಾಗಿ ಮಾಡುತ್ತಿದ್ದಲ್ಲಿ ನಿಮಗೆ ತೊಂದರೆಯಾಗದು. ನಮ್ಮನ್ನೆಲ್ಲಾ ಮುನ್ನೆಡೆಸುವವನು, ಜಗತ್‌ ಸೃಷ್ಟಿಗೆ ಕಾರಣನಾದ ಸಾಂಬಸದಾಶಿವ. ಪ್ರತಿ ಶುಕ್ರವಾರ ನಿಮ್ಮ ಮನೆಯಲ್ಲಿ ಧರ್ಮಪತ್ನಿ ಅಥವಾ ಮಾತೃಶ್ರೀಯವರಿಂದ ಗೋಧೂಳಿ ಲಗ್ನದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಿ ಕೈಲಾದ ಹಣವನ್ನು ದೇವರ ಮುಂದೆ ಇಟ್ಟು, ದಾರಿತೋರಿ ದುಃಖ ಪರಿಹರಿಸೆಂದು ಪ್ರಾರ್ಥಿಸಿದಲ್ಲಿ, ಮಹಾಕಾಳಿ, ಮಹಾಸರಸ್ವತಿ, ಧನರೂಪಿಯಾದ ಮಹಾಲಕ್ಷ್ಮೀಯು ಹರಸುತ್ತಾಳೆ. ದುರ್ಗಾಷ್ಟೋತ್ತರ, ಶ್ರೀ ಸೂಕ್ತ ಪಾರಾಯಣ ಮಾಡಿ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version