Site icon Vistara News

Astrology Answers : ಜೀವನದಲ್ಲಿ ಬರೀ ಸೋಲು ಕಾಣುತ್ತಿದ್ದೇನೆ, ದಯವಿಟ್ಟು ಪರಿಹಾರ ತಿಳಿಸಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಯಾವ ಕೆಲಸ ಮಾಡಲೂ ಉತ್ಸಾಹ ಇಲ್ಲ. ಜೀವನದಲ್ಲಿ ಬರೀ ಸೋಲು ಕಾಣುತ್ತಿದ್ದೇನೆ. ದಯವಿಟ್ಟು ಪರಿಹಾರ ತಿಳಿಸಿ.
ರಾಶಿ: ಕುಂಭ ನಕ್ಷತ್ರ: ಪೂರ್ವಾಭಾದ್ರ

ಪರಿಹಾರ: ಕುಂಭ ರಾಶಿಯವರಿಗೆ ಲಗ್ನದಲ್ಲಿ ಶನಿಯಿದ್ದು, ಏನನ್ನೂ ಸಾಧಿಸಲಾಗುವುದಿಲ್ಲ. ʻಅನ್ಯತಾ ಶರಣಂ ನಾಸ್ತಿ ತ್ವಮೇವ ಶರಣಂ ಮಮʼ ಎಂಬ ಉಕ್ತಿಯಂತೆ ದೇವರಿಗೆ ಶರಣಾಗಿ, ಆತನನ್ನೇ ನಂಬಿ ಆರಾಧಿಸಿ. ಕಳೆದ ಜನವರಿಯಲ್ಲಷ್ಟೇ ಶನಿಯು ಕುಂಭರಾಶಿಗೆ ಬಂದಿರುತ್ತಾನೆ. ʻನನಗೆ ಜೀವನದಲ್ಲಿ ಇದುವರೆಗೂ ಏನನ್ನೂ ಸಾಧಿಸಲಾಗಲಿಲ್ಲʼ ಎಂದು ನೀವು ಹೇಳಿದರೆ ಅದಕ್ಕೆ ನಿಮ್ಮ ಇಚ್ಛಾಶಕ್ತಿಯಲ್ಲಿನ ಕೊರತೆಯೇ ಕಾರಣ. ನಿಮಗೆ ಬೇಕಾಗಿರುವುದನ್ನು ಪಡೆದುಕೊಳ್ಳುವ ಸಂಕಲ್ಪ, ದೃಢವಾದ ಭಕ್ತಿ ನಿಮಗಿರಬೇಕು. ನನ್ನ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳುತ್ತೇನೆ ಎಂದು ಧೈರ್ಯ, ಉತ್ಸಾಹ, ಪರಿಣಿತಿ, ಚತುರತೆಯಿಂದ ನೀವು ಕಾರ್ಯಮಾಡಿದಾಗಲಷ್ಟೇ ಯಶಸ್ಸು ಪಡೆಯಲು ಸಾಧ್ಯ. ಆತ್ಮವಿಶ್ವಾಸದಿಂದ ಮಾತ್ರ ನಿಮಗೆ ಬೇಕಾಗಿರುವುದನ್ನು ದೊರೆಕಿಸಿಕೊಳ್ಳಲು ಸಾಧ್ಯ. ಸಾಲಿಗ್ರಾಮದ ನರಸಿಂಹನನ್ನು ಪೂಜಿಸಿ. ಹಟ್ಟಿಯಂಗಡಿ ಸಿದ್ಧಿವಿನಾಯಕನನ್ನು ಸಂದರ್ಶಿಸಿ ಬನ್ನಿ. ಶುಭವಾಗುವುದು. ನಿಮ್ಮ ಜೀವನದಲ್ಲಿ ಒಂದರ ಹಿಂದೊಂದರಂತೆ ಗೆಲುವು ಕಾಣುವಿರಿ. ಇನ್ನಾದರೂ ಉತ್ಸಾಹದಿಂದಿರಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version