Site icon Vistara News

Astrology Answers | ನನಗೆ ಜೀವನದಲ್ಲಿ ಒಳ್ಳೆಯ ಕಾಲ ಯಾವಾಗ ಬರುತ್ತದೆ ತಿಳಿಸಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನಗೆ ಜೀವನದಲ್ಲಿ ಇದುವರೆಗೂ ಒಳ್ಳೆಯ ದಿನಗಳೇ ಬರಲಿಲ್ಲ. ಮಾಡಿದ ಸಾಲ ತೀರಿಸಲಾಗಲಿಲ್ಲ. ನನಗೆ ಯಾವಾಗ ಒಳ್ಳೆಯದಾಗುತ್ತದೆ? ಸರ್ಕಾರಿ ಕೆಲಸವೇನಾದರೂ ಸಿಗಬಹುದೇ?.
ಜನ್ಮದಿನಾಂಕ : 04-07-1989 ನಕ್ಷತ್ರ: ಪುಷ್ಯಾ

ಪರಿಹಾರ: ನನಗೆ ಜೀವನದಲ್ಲಿ ಇದುವರೆಗೂ ಒಳ್ಳೆಯದೇ ಆಗಿಲ್ಲ ಎಂಬ ನಿಮ್ಮ ಮಾತನ್ನು ಒಪ್ಪುವುದು ಕಷ್ಟಸಾಧ್ಯ. ನಿಮಗೆ ಇಷ್ಟೊಂದು ದಿನ ದೇವರು ಬದುಕು ಕೊಟ್ಟು, ಆಯಸ್ಸು ಆರೋಗ್ಯ ಕೊಟ್ಟಿದ್ದಾನಲ್ಲ. ಇದಕ್ಕಿಂತ ಇನ್ನೇನು ಬೇಕು? ಇಲ್ಲಿ ನೀವು ನನಗೆ ತೃಪ್ತಿಯಾಗಿಲ್ಲ ಎಂದು ಹೇಳಬೇಕು. ನೀವೇನು ಮಾಡಿಕೊಂಡರೂ ಅದು ನಿಮಗೆ ತೃಪ್ತಿನೀಡಿಲ್ಲ. ಹೀಗಾಗಿ ನನಗೆ ಒಳ್ಳೆಯದಾಗಿಲ್ಲ ಎನ್ನುತ್ತಿದ್ದೀರಿ. ಇದನ್ನು ಹೀಗೆ ಪರಿಗಣಿಸಬಾರದು. ದೈವಾಂಶದಲ್ಲಿ ಏನು ಕೊಡಬೇಕೋ ಅದನ್ನು ಪರಮಾತ್ಮ ಕೊಟ್ಟೇ ಕೊಡುತ್ತಾನೆ. ಆದರೆ ಪ್ರಾರಬ್ದವೇ ಜಾಸ್ತಿಯಾದಾಗ ಅದಕ್ಕೆ ಯಾರೂ ಹೊಣೆಯಲ್ಲ. ಪೂರ್ವ ಜನ್ಮದ ಪಾಪಗಳು ನಮ್ಮನ್ನು ಕಾಡುತ್ತಿರುತ್ತವೆ. ಪುಷ್ಯಾ ನಕ್ಷತ್ರ ಕಟಕ ರಾಶಿಯವರಿಗೆ ಈಗ ಸಪ್ತಮದಲ್ಲಿ ಶನಿ ಇದ್ದಾನೆ. ಗುರುವೂ ಚೆನ್ನಾಗಿದ್ದಾನೆ. ಹೀಗಾಗಿ ಮುಂದಿನ ಏಪ್ರಿಲ್‌ವರೆಗೂ ಒಳ್ಳೆಯದಾಗುತ್ತದೆ. ಆಮೇಲೆ ಗುರು ಹತ್ತನೆ ಮನೆಗೆ ಹೋದರೂ ತೊಂದರೆ ನೀಡುವುದಿಲ್ಲ. ಗುರುವಿನ ಅನುಗ್ರಹ ಪಡೆಯಲು ಶ್ರೀ ಗುರು ದತ್ತಾತ್ರೇಯನನ್ನು ಆರಾಧಿಸಿ. ಪ್ರತಿ ತಿಂಗಳು ಒಮ್ಮೆ ಗಾಣಗಾಪುರಕ್ಕೆ ಹೋಗಿ ದತ್ತಾತ್ರೇಯನ ದರ್ಶನ ಮಾಡಿಕೊಂಡು ಬಂದರೆ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ?

Exit mobile version