Site icon Vistara News

Astrology Answers : ನನ್ನ ಕಷ್ಟಗಳು ದೂರವಾಗುತ್ತವೆಯೇ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನಗೆ ಜೀವನದಲ್ಲಿ ಒಂದಲ್ಲಾ ಒಂದು ಕಷ್ಟ ತಪ್ಪಿದ್ದಲ್ಲ, ನನ್ನ ಕಷ್ಟಗಳು ದೂರವಾಗುತ್ತವೆಯೇ ಗುರೂಜಿ?
ರಾಶಿ: ಧನಸ್ಸು ನಕ್ಷತ್ರ: ಪೂರ್ವಷಾಢ

ಪರಿಹಾರ: ಧನಸ್ಸು ರಾಶಿಗೆ ಈಗ ಒಳ್ಳೆಯ ಸಮಯ ಆರಂಭವಾಗಿದೆ. ಶನಿಯು ತೃತೀಯದಲ್ಲಿ ಕುಳಿತು ನಿಮ್ಮ ಕೆಲಸಗಳನ್ನು ಗಮನಿಸುತ್ತಿದ್ದು, ನೀವು ಮುಖ್ಯವಾಗಿ ಶ್ರಮ ವಹಿಸಿ ಕೆಲಸ ಮಾಡಿದರೆ ಶುಭವನ್ನು ಕರುಣಿಸುತ್ತಾನೆ. ನಿಮಗೆ ನಿಜವಾಗಿಯೂ ಈಗ ಶುಭ ದಿನ ಆರಂಭವಾಗಿದೆ. ಏಪ್ರಿಲ್ 21ರಿಂದ ತುಷ್ಟಿ ಪುಷ್ಟಿ ಕೊಟ್ಟು ದೈವ ಬಲ ನೀಡುತ್ತಾನೆ. ನಿಮ್ಮನ್ನು ಇದುವರೆಗೂ ಕಾಡುತ್ತಿದ್ದ ಏಳೂವರೆ ವರ್ಷದ ಶನಿ ಸಂಚಾರವು ಈಗ ಮುಗಿದಿದೆ. ಹೀಗಾಗಿ ಈ ಹಿಂದೆ ಅನುಭವಿಸಿದ ಕಷ್ಟಗಳು ಕೂಡ ದೂರವಾಗಬಹುದು. ಈಗ ನೀವು ನನಗೆ ಕಷ್ಟ ಎಂದು ಅಳುತ್ತಾ ಕುಳಿತರೆ ಕೇವಲ ಕಣ್ಣೀರು ಬಾಡಿ ಹೋಗುತ್ತದೆ ಅಷ್ಟೇ. ಚಿಂತಿಸ ಬೇಡಿ, ಶ್ರೀ ಗುರು ದತ್ತನನ್ನು ಕುರುವ ಪುರದಲ್ಲಿ ದರ್ಶಿಸಿ ಬನ್ನಿ. ಆತನನ್ನು ಅನಂತವಾಗಿ ಪೂಜಿಸಿ. ಅನಂತ ಪದ್ಮನಾಭ ವ್ರತ ಕಥೆ ಓದಿ. ಕಷ್ಟಗಳು ಕಳೆದು ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, ಇ-ಮೇಲ್‌ ವಿಳಾಸ: janasamparka@abhilashbc

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version