Site icon Vistara News

Astrology Answers : ರೈತನಾದ ನಾನು ಸ್ವಲ್ಪ ಜಮೀನು ಮಾರಿ ಸಾಲ ತೀರಿಸಬೇಕಾ ತಿಳಿಸಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಗುರುಗಳೇ. ನಾನು ರೈತ. 2016 ರಿಂದ ಶುಂಠಿ, ತಂಬಾಕು ಬೆಳೆ ಬೆಳೆಯುತ್ತಿದ್ದು, ತುಂಬಾ ಲಾಸ್ ಆಗಿದೆ. ಕೃಷಿಗೆ ಸಾಲ ಮಾಡಿ, ಬಡ್ಡಿ ಕೊಟ್ಟು 48 ಲಕ್ಷ ರೂ. ಲಾಸ್ ಮಾಡಿಕೊಂಡಿದ್ದೇನೆ. ಈಗ 26 ಲಕ್ಷದಷ್ಟು ಕೈ ಬಡ್ಡಿ ಸಾಲ ಇದೆ. ನನ್ನ ಪ್ರಶ್ನೆ ಏನೆಂದರೆ ಮುಂದೆ ವ್ಯವಸಾಯದಲ್ಲಿ ಪ್ರಗತಿ ಹೊಂದಿ ನನ್ನ ಸಾಲ ತಿರುತ್ತಾ. ಅಥವಾ ಸ್ವಲ್ಪ ಜಮೀನು ಮಾರಿ ಸಾಲ ತೀರಿಸಬೇಕಾ ತಿಳಿಸಿ ಕೊಡಿ.
ರಾಶಿ: ವೃಷಭ ನಕ್ಷತ್ರ: ಮೃಗಶಿರಾ

ಪರಿಹಾರ: ಜೂನ್‌ 18ರ ವರೆಗೂ ಅಷ್ಟಮಲ್ಲಿ ಶನಿ ಇದ್ದಾನೆ. ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದಾನೆ. ಏನೇ ಬೆಳೆಯನ್ನು ಬೆಳೆದರೂ ಅದಕ್ಕೆ ಪೂರಕವಾಗಿ ಮಾರಾಟ ಮಾಡುವ ತಂತ್ರಗಾರಿಕೆ ಗೊತ್ತಿರಬೇಕು. 2018ರಿಂದ 2023ರ ವರೆಗೂ ಶನಿ ಸಪ್ತಮ – ಅಷ್ಟಮದಲ್ಲಿದ್ದ ಕಾರಣ ನೀವು ಬೇಡಿದ್ದನ್ನು ಕೊಡದೇ ಇರಬಹುದು. ನಿಮ್ಮ ದೈವ ಪ್ರಾರ್ಥನೆ ಸರಿಯಿದ್ದು, ಸಾಕ್ಷಾತ್ ಶಿವನನ್ನು ಪೂಜಿಸಿದರೆ ಸಂಕಷ್ಟ ಬರುತ್ತಿರಲಿಲ್ಲ. ಏಪ್ರಿಲ್ 21ರ ನಂತರ ಗುರು ಏಕಾದಶಕ್ಕೆ ಬರುತ್ತಾನೆ. ಪಾರ್ವತಿ ಸಾಂಬಸದಾಶಿವನನ್ನು ಪ್ರಾರ್ಥಿಸಿ. ನಿಮ್ಮ ಸಾಲ ತೀರಿಸಲು ದಾರಿ ತೋರಿ, ಇಚ್ಛೆ ಪೂರೈಸುತ್ತಾನೆ. ದೈವವನ್ನು ಮರೆತವನಿಗೆ ಬೆಳಕು ಕಾಣಲು ಹೇಗೆ ಸಾಧ್ಯ?. ಸೋಮವಾರ ಸಂಜೆ ಈಶ್ವರನಿಗೆ ಅಭಿಷೇಕ ಮಾಡಿಸಿ. ಮಾಸಕೊಮ್ಮೆ ನೀವು ಶ್ರಿಶೈಲ ಮಲ್ಲಿಕಾರ್ಜುನನ್ನು ಸಂದರ್ಶಿಸಿ ಬನ್ನಿ. ಎಲ್ಲವೂ ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, ಇ-ಮೇಲ್‌ ವಿಳಾಸ: janasamparka@abhilashbc

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Shakuna Shastra : ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೇ, ಅಶುಭವೇ?!

Exit mobile version