Site icon Vistara News

ಭವಿಷ್ಯ ಪ್ರಶ್ನೋತ್ತರ | ನನಗೆ ಸರಿಯಾದ ಕೆಲಸ ಇಲ್ಲ, ಮುಂದೆ ಸರ್ಕಾರಿ ಕೆಲಸ ಸಿಗಬಹುದೇ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಬಹಳ ದಿನಗಳಿಂದ ಹಣಕಾಸಿನ ಸಮಸ್ಯೆ ಇದೆ ಗುರೂಜಿ, ಇದು ಜಾಸ್ತಿಯಾಗಲು ಕಾರಣ ನನಗೆ ಉದ್ಯೋಗವಿಲ್ಲದ್ದು. ಎಲ್ಲೂ ಕೆಲ್ಸ ಸರಿಹೋಗುತ್ತಿಲ್ಲ. ಸರ್ಕಾರಿ ಕೆಲಸ ಸಿಗಬಹುದೇ?
ಜನ್ಮದಿನಾಂಕ : 22-05-1991 ನಕ್ಷತ್ರ: ಹುಬ್ಬಾ

ಪರಿಹಾರ: ಹುಬ್ಬಾ ನಕ್ಷತ್ರ ಸಿಂಹ ರಾಶಿಯವರಿಗೆ ಈಗ ತಾತ್ಕಾಲಿಕವಾಗಿ ಗುರು ಎಂಟನೇ ಮನೆಯಲ್ಲಿದ್ದಾನೆ. ಅಷ್ಟಮ ಗುರು ಈಗ ಯಾವ ಪ್ರಗತಿಯನ್ನೂ ಕೊಡುವುದಿಲ್ಲ. ಶನಿ ಈಗ ಚೆನ್ನಾಗಿದ್ದಾನೆ. ಹೀಗಾಗಿ ನೀವು ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನ ಪಡುತ್ತಲೇ ಇರಿ. ಏಪ್ರಿಲ್‌ ತಿಂಗಳಿನಲ್ಲಿ ನಿಮಗೆ ಕೆಲಸ ಬದಲಾವಣೆಯಾಗಿ, ಇಷ್ಟಾರ್ಥ ಸಿದ್ಧಿಯಾಗುತ್ತದೆ. ನೀವು ಅಂದುಕೊಂಡಿದ್ದೆಲ್ಲಾ ಈಡೇರಬೇಕಾದರೆ, ತ್ರಿಮೂರ್ತಿಗಳ ಸ್ವರೂಪನಾದ ಶ್ರೀ ಗುರು ದತ್ತಾತ್ರೇಯನು ನೆಲೆಸಿರುವ ಗಾಣಗಾಪುರಕ್ಕೆ ತೆರಳಿ ಅಲ್ಲಿ ದೇವರನ್ನು ದರ್ಶಿಸಿ, ತಮ್ಮ ಕೈಯಲ್ಲಾದ ಸೇವೆ, ಪೂಜೆಯನ್ನು ಮಾಡಿ. ಸಂಗಮಕ್ಕೆ ತೆರಳಿ ಧ್ಯಾನವನ್ನು ಮಾಡಿ ಬಂದಲ್ಲಿ, ನಿಮ್ಮ ಮನೋಕಾಮನೆಗಳು ಈಡೇರುವ ಕಾಲ ಬರುತ್ತದೆ, ಯಶಸ್ಸು ದೊರೆಯುತ್ತದೆ.

ನೀವೂ ಪ್ರಶ್ನೆ ಕೇಳಬಹುದು….…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Horoscope Today | ಬುಧನ ವಕ್ರಿ ಸಂಚಾರ; ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

Exit mobile version