Site icon Vistara News

Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ

Ram Navami hosanagara

#image_title

ಹೊಸನಗರ: “ರಾಮನ ಬದುಕು ನಮಗೆಲ್ಲ ಆದರ್ಶವಾದುದು, ಪ್ರಭು ರಾಮನ ಜಾತಕ ಅತ್ಯಂತ ದಿವ್ಯವಾದುದು, ವಿಶ್ವ ನಾಯಕ ಶ್ರೀರಾಮನ (Ram Navami 2023) ಹೆಸರೇ ನಮಗೆಲ್ಲರಿಗೂ ಸ್ಫೂರ್ತಿ” ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಹೊಸನಗರ ರಾಮಚಂದ್ರಪುರ ಪ್ರಧಾನ ಮಠದಲ್ಲಿ ನಡೆದ ರಾಮೋತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡುತ್ತಾ,
“ರಾಮನ ಜೀವನದಂತೆ ಶುದ್ಧವಾದ ಜೀವನ ನಮ್ಮೆಲ್ಲರದೂ ಆಗಬೇಕು. ರಾವಣ ಉತ್ತಮ ಕುಲದಲ್ಲಿ ಹುಟ್ಟಿದರೂ ತನ್ನ ದುಷ್ಟ ಕೆಲಸಗಳಿಂದ ಕನಿಷ್ಟನಾದ. ನಾವು ಮಾಡುವ ಉತ್ತಮ ಕೆಲಸಗಳಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ” ಎಂದರು.

“ರಾಮೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀರಾಮ ದೇವರ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಟ್ಟು ಜೋಗುಳ ಹಾಡಲಾಯಿತು. ರಥದಲ್ಲಿ ಸ್ವಾಮೀಜಿಗಳು ರಾಮ ದೇವರನ್ನು ಪೂಜಿಸಿದ ನಂತರ ರತೋತ್ಸವ ನಡೆಸಲಾಯಿತು.

ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಾಗೂ ಸಾಗರ ಆಮ್ ಆದ್ಮಿ ಪಕ್ಷದ ಸ್ಪರ್ಧಿ ದಿವಾಕರ್ ಅವರು ಪಾಲ್ಗೊಂಡು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸಾವಿರಾರು ಜನ ಶಿಷ್ಯರು ರಾಮೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ‌JDS Karnataka: ಜೆಡಿಎಸ್‌ ವಿಶ್ವಾಸಕ್ಕೆ ಪಡೆಯಲು ಬಿಜೆಪಿ-ಕಾಂಗ್ರೆಸ್‌ ಕಾಂಪಿಟ್‌ ಮಾಡ್ತಿದ್ದಾರೆ: ಎಚ್‌.ಡಿ. ಕುಮಾರಸ್ವಾಮಿ

ಚನ್ನಗಿರಿಯ ಮೌದ್ಗಲ್ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ರಥೋತ್ಸವ.

ಚನ್ನಗಿರಿಯಲ್ಲಿ ವಿಜೃಂಭಣೆಯ ರಾಮನವಮಿ

ಚನ್ನಗಿರಿ (ದಾವಣಗೆರೆ): ರಾಮ ನವಮಿಯ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ಮೌದ್ಗಲ್ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಬಣೆಯಿಂದ ಜಗುಗಿತು. ಭಕ್ತರು ರಥೋತ್ಸವಕ್ಕೆ ಉತ್ತತ್ತಿ ಬಾಳೆಹಣ್ಣು, ಹಾಗೂ ಮೆಣಸಿನಕಾಳುಗಳನ್ನು ಎಸೆಯುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಈ ವೇಳೆ ನೂರಾರು ಎತ್ತಿನ ಗಾಡಿಗಳಲ್ಲಿ ಭಕ್ತರು ಪಾನಕ ವಿತರಿಸಿದರು.

ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರು ಸೇರಿ ಇಲ್ಲೆಲ್ಲ ವರ್ಷಧಾರೆ

ಹಿರೇಗೋಣಿಗೆರೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ

ಹೊನ್ನಾಳಿ (ದಾವಣಗೆರೆ): ತಾಲೂಕಿನ ಹಿರೇಗೋಣಿಗೆರೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅತ್ಯಂತ ನಡೆಯಿತು. ಭಕ್ತರು ರಥೋತ್ಸವಕ್ಕೆ ತೆಂಗಿನ ಕಾಯಿ, ಉತ್ತತ್ತಿ, ಬಾಳೆಹಣ್ಣು ಹಾಗೂ ಮೆಣಸಿನ ಕಾಳುಗಳನ್ನು ಎಸೆಯುವುದರ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ದಿಂಡು ಉರುಳುದು, ಹರಕೆ, ಕಾರ್ಯಗಳು ಜರುಗಿದವು. ನಂತರ ಗ್ರಾಮದ ರಾಜಬೀದಿಗಳಲ್ಲಿ ಆಂಜನೇಯ ಸ್ವಾಮಿ, ಬೇಟೆ ಮರದಮ್ಮ ದೇವಿ ಹಾಗೂ ಹೊಳೆಹರಳಹಳ್ಳಿಯ ಆಂಜನೇಯನ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಸಂಜೆ ಮುಳ್ಳೋತ್ಸವ ಹಾಗೂ ಭೂತನ ಸೇವೆ ನಡೆಯಿತು.

ಇದನ್ನೂ ಓದಿ: Kajal Aggarwal: ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ ಕಾಜಲ್‌ ಅಗರ್ವಾಲ್‌

Exit mobile version