Site icon Vistara News

Sirsi News: ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ, ಶ್ರೀರಾಮ ರಥೋತ್ಸವ

Sri Ram Navami sirsi

#image_title

ಶಿರಸಿ: “ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ (Sri Rama Navami Utsava) ಹಾಗೂ ಶ್ರೀರಾಮ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಮಿತಿಯ ಅಧ್ಯಕ್ಷ ವಿಷ್ಣು ಹರಿಕಾಂತ ತಿಳಿಸಿದರು.

ಶ್ರೀ ಸದ್ಗರು ನಿತ್ಯಾನಂದ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮಾ.29 ಹಾಗೂ 30ರಂದು ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಅಖಂಡ ಶ್ರೀರಾಮ ತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಮಾ.30 ರ ಬೆಳಗ್ಗೆ 11.30 ರಿಂದ ಶ್ರೀರಾಮ ನವಮಿ ಉತ್ಸವದಲ್ಲಿ ಮಠದ ಆವರಣದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮಾ.31 ರಂದು ಶ್ರೀರಾಮ ರಥೋತ್ಸವಕ್ಕೆ ಚಾಲನೆ ನಿಡಲಾಗುತ್ತದೆ‌. ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ ನಡೆಯಲಿದ್ದು, ಸಂಜೆ 5.30 ಕ್ಕೆ ರಥಾರೋಹಣ ಪೂಜೆ ಹಾಗೂ ರಥಾನಯನ ನೆರವೇರಲಿದೆ” ಎಂದರು.

ಇದನ್ನೂ ಓದಿ: 2006ರ ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ದೋಷಿ; ಯುಪಿ ಕೋರ್ಟ್

ಈ ಸಂಧರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ರಾಮ ಎಸ್. ಮೊಗೇರ್, ನಿಂಗಪ್ಪ ಕೊಂಡ್ಲಿ, ಪಾಂಡುರಂಗ ಪಾಟೀಲ್, ರವಿ ತಂಡನ್ ಉಪಸ್ಥಿತರಿದ್ದರು.

Exit mobile version