Site icon Vistara News

Temple vandalised in Australia : ದೇಗುಲಗಳ ಮೇಲಿನ ದಾಳಿಗೆ ಭಾರತ ಖಂಡನೆ

hindu temple

ಮೆಲ್ಬೊರ್ನ್​ : ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರು ಹಿಂದು ದೇಗುಲಗಳ ಮೇಲೆ (Temple vandalised in Australia) ದಾಳಿ ನಡೆಸುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದು ಭಯೋತ್ಪಾದಕ ಕೃತ್ಯ ನಡೆಸುವವರಿಗೆ ಕಟ್ಟಕಡೆಯ ಎಚ್ಚರಿಕೆ ಎಂಬುದಾಗಿ ಹೇಳಿದೆ. ಕಳೆದ ತಿಂಗಳು ಇಲ್ಲಿನ ಸ್ವಾಮಿನಾರಾಯಣ ದೇವಸ್ಥಾನ, ಇಸ್ಕಾನ್​ ಮಂದಿರ ಹಾಗೂ ಐತಿಹಾಸಿಕ ಶಿವ- ವಿಷ್ಣು ದೇವಸ್ಥಾನಗಳ ಮೇಲೆ ದಾಳಿ ಮಾಡಿ ಹಿಂದು ವಿರೋಧಿ ಬರಹಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಗುರುವಾರ (ಜನವರಿ 26ರಂದು) ಹೇಳಿಕೆ ಬಿಡುಗಡೆ ಮಾಡಿದೆ.

ಭಾರತ ವಿರೋಧಿಗಳ ವೈಭವೀಕರಣ ನಡೆಯುತ್ತಿದೆ. ಹಿಂದುಗಳ ಪವಿತ್ರ ತಾಣಗಳ ಮೇಲೆ ದಾಳಿ ನಡೆಯುತ್ತಿದೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇದುಕೊನೇ ಎಚ್ಚರಿಕೆ ಎಂಬುದಾಗಿ ಆಸ್ಡ್ರೇಲಿಯಾದ ರಾಜ್ಯಧಾನಿ ಕ್ಯಾನ್​ಬೆರಾದಲ್ಲಿರುವ ರಾಯಭಾರ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದೆ.

‘ಆಸ್ಟ್ರೇಲಿಯಾದಲ್ಲಿ ನೆಲೆಯೂರಿರುವ ಖಲಿಸ್ತಾನಿ ಉಗ್ರರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸಿಖ್ಸ್​ ಫಾರ್‌ ಜಸ್ಟಿಸ್​ (ಎಸ್‌ಎಫ್‌ಜೆ) ಎನ್ನುವ ನಿಷೇಧಿತ ಭಯೋತ್ಪಾದನಾ ಸಂಸ್ಥೆ ಹಾಗೂ ಆಸ್ಟ್ರೇಲಿಯಾದ ಹೊರಗೆ ಇರುವ ಇಂಥ ಸಂಸ್ಥೆಗಳು ಕುಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿವೆ’ ಎಂದು ಭಾರತ ಆರೋಪಿಸಿದೆ.

ಇದನ್ನೂ ಓದಿ | ಆಕ್ರಮಣಕ್ಕೆ ಒಳಗಾದ ಎಲ್ಲ ದೇಗುಲಗಳ ಮರುನಿರ್ಮಾಣ ಬೇಕಿಲ್ಲ ಎಂದ ಸದ್ಗುರು

ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಕಚೇರಿಯೂ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ದೇಗುಲಗಳ ಧ್ವಂಸ ಪ್ರಕರಣ ಆಘಾತ ತಂದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

Exit mobile version