Site icon Vistara News

ಬಾರ್‌ನಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

ಮೈಸೂರು: ಹಳೇ ವೈಷಮ್ಯ ಹಿನ್ನಲೆಯಲ್ಲಿ ಹಾಡುಹಗಲೇ ಬಾರ್‌ನಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆದ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕು ಬನ್ನೂರಿನಲ್ಲಿ ನಡೆದಿದೆ. ಹಲ್ಲೆ ನಡೆದ ಕೃತ್ಯವು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ದಯಾನಂದ ( 29 ) ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ನಡೆಸಿದ ಆರೋಪಿಗಳಾದ ಗುರು, ಬಿಂದಾಸ್‌, ಚಂದ್ರು ಪರಾರಿಯಾಗಿದ್ದಾರೆ. ಬನ್ನೂರಿನ ಬಾರ್‌ ಆಂಡ್‌ ರೆಸ್ಟೋರೆಂಟ್‌ನಲ್ಲಿ ದಯಾನಂದ್‌ ವೆಹಿಕಲ್‌ ಲೋನ್‌ ಸೆಟಲ್‌ ಮೆಂಟ್‌ ಮಾಡಿಕೊಂಡು ಊಟ ಮಾಡುತ್ತಿದ್ದ ವೇಳೆ ಗುರು, ಬಿಂದಾಸ್‌ , ಚಂದ್ರ ಸೇರಿದಂತೆ ಐದಾರು ಯುವಕರ ಗುಂಪು ಏಕಾಏಕಿ ದಾಳಿ ನಡೆಸಿದೆ. ದಯಾನಂದ್‌ ಮೇಲೆ ಲಾಂಗ್‌ ಮತ್ತು ಬಿಯರ್‌ ಬಾಟಲ್‌ಗಳಿಂದ ಮನಸೋ ಇಚ್ಚೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದೀಗ ತೀರ್ವವಾಗಿ ಗಾಯಗೊಂಡ ದಯಾನಂದ್‌ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬನ್ನೂರು ಪಟ್ಟಣದ ನಿವಾಸಿಗಳಾದ ಆರೋಪಿಗಳಿಗೂ ಹಾಗೂ ದಯಾನಂದ್‌ ನಡುವೆ ಹಳೇ ದ್ವೇಷ ಇತ್ತು. ಈ ಹಿನ್ನಲೆಯಲ್ಲಿ ದಯಾನಂದ್‌ ಬನ್ನೂರು ತೊರೆದು ಮೈಸೂರಿನಲ್ಲಿ ನೆಲೆಸಿದ್ದರು. 6 ತಿಂಗಳ ಹಿಂದೆ ಮತ್ತೆ ಬನ್ನೂರಿಗೆ ವಾಪಾಸ್ಸು ಆಗಿದ್ದರು. ಬಾರ್‌ ನಲ್ಲಿ ದಯಾನಂದ್‌ ಇರುವ ಮಾಹಿತಿಯನ್ನು ತಿಳಿದ ತಂಡ ದಾಳಿ ನಡೆಸಿದೆ. ಈ ಕುರಿತು ಬನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://vistaranews.com/wp-content/uploads/2022/05/WhatsApp-Video-2022-05-03-at-8.49.57-AM.mp4
Exit mobile version