Site icon Vistara News

ರಾಯಚೂರು ವಿವಿ ನೂತನ ಸಿಂಡಿಕೇಟ್‌ ಸದಸ್ಯರ ನೇಮಕ

ರಾಯಚೂರು

ರಾಯಚೂರು: ರಾಯಚೂರು ವಿಶ್ವವಿದ್ಯಾಲಯಕ್ಕೆ ಇಬ್ಬರು ನೂತನ ಸಿಂಡಿಕೇಟ್‌ ಸದಸ್ಯರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯಪಾಲರು ನೂತನ ಸಿಂಡಿಕೇಟ್‌ ಸದಸ್ಯರನ್ನು ನೇಮಕ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000ರ ಸೆಕ್ಷನ್‌ 28(1)(e) ಅಡಿಯಲ್ಲಿ ಈ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ಕೂಡಲೇ ಇಬ್ಬರು ಸದಸ್ಯರೂ ಕಾರ್ಯಪ್ರವೃತ್ತರಾಗಲಿದ್ದಾರೆ. ಹಾಗೂ ಈ ಸದಸ್ಯತ್ವದ ಅವಧಿ ಮೂರು ವರ್ಷ ಎಂದು ತಿಳಿಸಲಾಗಿದೆ.

ಇಬ್ಬರು ಸಿಂಡಿಕೇಟ್‌ ಸದಸ್ಯರು:

  1. ಶ್ರೀ ಎ.ಎಂ. ನಾಗೇಂದ್ರ ಪ್ರಸಾದ್‌
    ಎಸ್.ಎಸ್ ಬೆಂಗಳೂರು ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ.
  2. ಶ್ರೀ ಶಿವಬಸಪ್ಪ ಮಾಲಿಪಾಟೀಲ್
    ರಾಯಚೂರು

ಹೆಚ್ಚಿನ ಓದಿಗಾಗಿ: Dr.B.R.Ambedkar Birthday: ಮಹಾನಾಯಕನ 17 ನುಡಿಮುತ್ತುಗಳು

Exit mobile version