Site icon Vistara News

ಕೆ.ಎಸ್‌. ಈಶ್ವರಪ್ಪ ಆಪ್ತ ಸೇರಿ 14 ಜನರು ಬಿಜೆಪಿಯಿಂದ ಉಚ್ಚಾಟನೆ

vijayapura bjp

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ 14 ಜನರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್. ಎಸ್. ಪಾಟೀಲ್ ಕೂಚಬಾಳ ಈ ಆದೇಶ ಹೊರಡಿಸಿದ್ದು, ಆರು ವರ್ಷ ಪಕ್ಷದಿಂದ ಹೊರದಬ್ಬಲಾಗಿದೆ.

ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯವಾಗಿ ಈ 14 ಜನರು ಸ್ಪರ್ಧಿಸಿದ್ದರು. ಪಕ್ಷದ ನಿರ್ಧಾರ ಧಿಕ್ಕರಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ.

ಉಚ್ಚಾಟನೆ ಆಗಿರುವ 14 ಜನರಲ್ಲಿ ಕೆ. ಎಸ್. ಈಶ್ವರಪ್ಪ ಆಪ್ತ ರಾಜು ಬಿರಾದಾರ, ಮಾಜಿ ಮೇಯರ್ ಸಂಗೀತಾ ಪೋಳ, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ರವಿ ಬಗಲಿ ಅವರೂ ಸೇರಿದ್ದಾರೆ.

ಇದನ್ನೂ ಓದಿ | Bike Thieves | ವಿಜಯಪುರದಲ್ಲಿ ಸಿಕ್ಕಿ ಬಿದ್ದರು ಬೈಕ್‌, ಟ್ರ್ಯಾಕ್ಟರ್‌ ಕಳ್ಳರು; ಶಿವಮೊಗ್ಗದಲ್ಲಿ ಪೆಟ್ರೋಲ್‌ ಕಳ್ಳರ ಕಾಟ

Exit mobile version