Site icon Vistara News

ಹಾಳಾಗಿ ನಿಂತಿದ್ದ ಟ್ರ್ಯಾಕ್ಟರ್​ಗೆ 2 ಕಾರುಗಳು ಡಿಕ್ಕಿ, ಮೂವರ ಸಾವು; ರೈಲಿಗೆ ಸಿಲುಕಿ ಯುವಕ ದುರ್ಮರಣ

Car Accident

ಮೈಸೂರು: ನಿಂತಿದ್ದ ಟ್ರ್ಯಾಕ್ಟರ್​ಗೆ ಕಾರುಗಳು ಡಿಕ್ಕಿಯಾಗಿ (Road Accident) ಮೂವರು ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದ ಬಳಿ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಕೆಟ್ಟು ನಿಂತಿತ್ತು. ಇಂದು ಮುಂಜಾನೆ 4.30ರ ಹೊತ್ತಿಗೆ ಈ ಟ್ರ್ಯಾಕ್ಟರ್​ಗೆ ಎರಡು ಕಾರುಗಳು ಡಿಕ್ಕಿಯಾಗಿವೆ. ಎರಡೂ ಕಾರುಗಳಲ್ಲಿದ್ದ ಮೂವರು ಮೃತಪಟ್ಟಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ.

ಮುದಾಸೀರ್, ಮುಜಾಯಿದ್​, ಅಹ್ಮದ್​ ಪಾಷಾ ಮೃತಪಟ್ಟವರು. ಇನ್ನು ಗಾಯಗೊಂಡ ಮೂವರ ಹೆಸರು ಗೊತ್ತಾಗಿಲ್ಲ. ಎರಡೂ ಕಾರುಗಳೂ ಪಿರಿಯಾಪಟ್ಟಣದಿಂದ ಹುಣಸೂರಿಗೆ ಪ್ರಯಾಣ ಮಾಡುತ್ತಿದ್ದವು. ಬೆಳಗಿನ ಜಾವದ ಕತ್ತಲಲ್ಲಿ ಸರಿಯಾಗಿ ಕಾಣಿಸದೆ ಟ್ರ್ಯಾಕ್ಟರ್​ಗೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Road Accident : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಸರಣಿ ಅಪಘಾತ; ಟ್ರಾಫಿಕ್‌ ಜಾಮ್

ರೈಲ್ವೆ ಹಳಿ ದಾಟುವಾಗ ವ್ಯಕ್ತಿ ಸಾವು
ವಿಜಯನಗರದ ಹೊಸಪೇಟೆಯ ಚಿತ್ತವಾಡ್ಗಿ ಎಂಬಲ್ಲಿ ರೈಲ್ವೆ ಹಳಿ ದಾಟುತ್ತಿದ್ದ 23ವರ್ಷದ ಯುವಕನಿಗೆ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಜಾಫರ್ ಹುಸೇನ್​ ಸಾಧಿಕ್ (23) ಮೃತ. ಈತ ಕತ್ತಲಲ್ಲಿ ರೈಲ್ವೆ ಹಳಿ ಕ್ರಾಸ್ ಮಾಡುತ್ತಿದ್ದ. ಇದೇ ವೇಳೆ ಆ ಟ್ರ್ಯಾಕ್​ನಲ್ಲಿ ಬಂದ ರೈಲಿಗೆ ಸಿಲುಕಿದ್ದಾನೆ. ಈತನ ಮೃತದೇಹ ಛಿದ್ರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Exit mobile version