Site icon Vistara News

ಶಿವಮೊಗ್ಗದಲ್ಲಿ ಬಸ್‌ಗಳ ಮುಖಾಮುಖಿ ಡಿಕ್ಕಿಯಾಗಿ 40 ಮಂದಿಗೆ ಗಾಯ

ಬಸ್‌ಗಳ

ಶಿವಮೊಗ್ಗ: ಜಿಲ್ಲೆಯ ಉಂಬ್ಳೆಬೈಲಿನ ಲಕ್ಕಿನಕೊಪ್ಪ ಕ್ರಾಸ್‌ ತೋಟದ ಕೆರೆಯ ಸಮೀಪ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಶುಕ್ರವಾರ ಮುಖಾಮುಖಿ ಡಿಕ್ಕಿಯಾಗಿ ಸುಮಾರು 40 ಪ್ರಯಾಣಿಕರಿಗೆ ಗಾಯಗಳಾಗಿವೆ. ಶೃಂಗೇರಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಶಿವಮೊಗ್ಗದಿಂದ ಕೊಪ್ಪಕ್ಕೆ ತೆರಳುತ್ತಿದ್ದ ಬಸ್ ನಡುವೆ‌ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡಿರುವ ಕೆಎಸ್‌ಆರ್‌ಟಿ ಬಸ್ ಚಾಲಕ ಮಲ್ಲೇಶ್,‌ ಖಾಸಗಿ ಬಸ್ ಚಾಲಕನಾದ ಕುಂಚೆಬೈಲು ನಿವಾಸಿ ಶ್ರೀಧರ್ ಭಟ್ ಸೇರಿ 40 ಪ್ರಯಾಣಿಕರನ್ನು ಶಿವಮೊಗ್ಗದ ಮೆಗ್ಗಾನ್‌ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್‌ ಚಾಲಕ ಶ್ರೀಧರ್‌ ಭಟ್ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಬಸ್‌ಗಳೆಡರೂ ಭಾಗಶಃ ಹಾನಿಗೀಡಾಗಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಲಾರಿ-ಖಾಸಗಿ ಬಸ್‌ ಡಿಕ್ಕಿಯಾಗಿ 8 ಮಂದಿ ಸಾವು

Exit mobile version