Site icon Vistara News

Boy Drowned: ಈಜಾಡಲು ಹೋಗಿ ಸ್ನೇಹಿತರ ಕಣ್ಣೆದುರೇ ನೀರಲ್ಲಿ ಮುಳುಗಿ ಬಾಲಕ ಸಾವು

A boy drowned in the water after going for a swim in front of his friends

#image_title

ಚಿಕ್ಕಬಳ್ಳಾಪುರ: ಈಜಾಡಲು ಹೋಗಿ ಸ್ನೇಹಿತರ ಕಣ್ಣೆದುರೇ ನೀರಲ್ಲಿ ಮುಳುಗಿ (Boy Drowned) ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಕೌರನಹಳ್ಳಿ ಬಳಿ ಬುಧವಾರ ನಡೆದಿದೆ. ಕಲ್ಲು ಕ್ವಾರಿ ನೀರಿನಲ್ಲಿ ಈಜಾಡಲು ಹೋಗಿದ್ದಾಗ ಬಾಲಕ ಮೃತಪಟ್ಟಿದ್ದಾನೆ.

ಬೆಂಗಳೂರಿನ ರಾಜಾಜಿನಗರದ ಮನೋಜ್ (17) ಮೃತ. ಬೆಂಗಳೂರಿನಿಂದ 10 ಬಾಲಕರು, ಈಶ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ವೀಕ್ಷಿಸಲು ತಾಲೂಕಿಗೆ ಆಗಮಿಸಿದ್ದರು. ಪ್ರತಿಮೆ ವೀಕ್ಷಣೆ ಬಳಿಕ ವಾಪಸಾಗುವಾಗ ಕೌರನಹಳ್ಳಿ ಬಳಿ ಕಲ್ಲು ಕ್ವಾರಿಯನ್ನು ಕಂಡಿದ್ದಾರೆ. ಅಲ್ಲಿ ನೀರಿನಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ಬಾಲಕ ಮನೋಜ್‌ ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ | Love and murder : ಬೇರೆ ಮದುವೆಗೆ ಒಪ್ಪಿಕೊಂಡ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದು ಹಾಕಿದ ಕಿರಾತಕ

Exit mobile version