Site icon Vistara News

ಸ್ನೇಹಿತನ ಹೆಂಡ್ತಿಯನ್ನೇ ಅಪಹರಿಸಿ ಅತ್ಯಾಚಾರವೆಸಗಿದ ಕಾಮುಕರು; ಒಬ್ಬ ಸೆರೆ, ಮತ್ತೊಬ್ಬ ಪರಾರಿ

Physical Abuse

ಕೋಲಾರ: ಇಲ್ಲಿನ ಮಾಲೂರು ತಾಲೂಕಿನ ಮಾಸ್ತಿ ಠಾಣೆ ವ್ಯಾಪ್ತಿಯಲ್ಲಿ ಕಾಮುಕರಿಬ್ಬರು ಸ್ನೇಹಿತನ ಪತ್ನಿಯನ್ನೇ ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಸಂಘದ ಸಾಲದ ಹಣವನ್ನು ಡ್ರಾ ಮಾಡಿ ಹೊರಬಂದ ಸಂತ್ರಸ್ತೆಗೆ ನಿದ್ರೆ ಮಾತ್ರೆ ಹಾಕಿದ್ದ ಜ್ಯೂಸ್‌ ಕುಡಿಸಿದ್ದು, ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆ ಅಲ್ಲಿಂದ ಅಪಹರಿಸಿದ್ದಾರೆ.

ಪರಾರಿ ಆಗಿರುವ ಮುನಿರಾಜು ಹಾಗೂ ಬಂಧನವಾಗಿರುವ ವೆಂಕಟೇಶ್‌

ತೊರಲಕ್ಕಿ ಗ್ರಾಮದ ವೆಂಕಟೇಶ ಹಾಗೂ‌ ಮುನಿರಾಜು ಎಂಬುವವರು ಈ ಕೃತ್ಯವನ್ನು ಎಸಗಿದ್ದಾರೆ. ಮಹಿಳೆಯನ್ನು ಅಪಹರಿಸಿ ಅಲ್ಲಿಂದ ರಾತ್ರಿ ವೇಳೆ ಬೂದಿ ಕೋಟೆ ಕಾಡಿನಲ್ಲಿ ವಿವಸ್ತ್ರಗೊಳಿಸಿದ್ದಾರೆ. ಪ್ರಜ್ಞೆ ಬಂದಾಗ ಸಂತ್ರಸ್ತೆಯ ಮೈಮೇಲೆ ಮುನಿರಾಜು ಎರಗಿದ್ದಾನೆ. ಈ ಕಾಮುಕರಿಂದ ತಪ್ಪಿಸಿಕೊಳ್ಳಲು ಮಹಿಳೆ ಯತ್ನಿಸಿದಾಗ ಮುನಿರಾಜು ಅಲ್ಲಿದ್ದ ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಇತ್ತ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಬಂಗಾರಪೇಟೆ ಸರ್ಕಾರಿ ‌ಆಸ್ಪತ್ರೆಯ ಮುಂದೆ ಬಿಟ್ಟು ಆರೋಪಿಗಳು ಪರಾರಿ ಆಗಿದ್ದಾರೆ. ಸಂತ್ರಸ್ತೆಯ ಗಂಡ ಸೇರಿ‌ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಎ ಒನ್ ಆರೋಪಿ ವೆಂಕಟೇಶ್ ಬಂಧನವಾಗಿದೆ. ಮತ್ತೊಬ್ಬ ಆರೋಪಿ ಮುನಿರಾಜು ತಲೆ‌ಮರೆಸಿಕೊಂಡಿದ್ದು, ಪೊಲೀಸರಿಂದ ಹುಡುಕಾಟ ನಡೆದಿದೆ.

ಇದನ್ನೂ ಓದಿ: Karnataka Election: ಸಿ.ಟಿ. ರವಿ ಎದುರು ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ 1 ಕೋಟಿ ರೂ. ಕೊಡುವೆನೆಂದ ಅಭಿಮಾನಿ!

Exit mobile version