Site icon Vistara News

ಗಂಗಾವಳಿ ನದಿ ರಭಸಕ್ಕೆ ಕೊಚ್ಚಿ ಹೋದ ಲಾರಿ; ಐವರ ರಕ್ಷಣೆ, ಓರ್ವ ನಾಪತ್ತೆ

ಶಿರಸಿ: ತಾತ್ಕಾಲಿಕ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರೂ ನಿರ್ಲಕ್ಷಿಸಿ, ಲಾರಿ ಚಲಾಯಿಸಿದ್ದರಿಂದ ಅದು ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ಪನಸಗುಳಿಯ ಗಂಗಾವಳಿ ನದಿಯಲ್ಲಿ ನಡೆದಿದೆ.

ಲಾರಿಯಲ್ಲಿದ್ದ ಐವರ ರಕ್ಷಣೆ ಮಾಡಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಲಾರಿ ಚಾಲಕ ರಾಜೇಶ್ ಹರಿಕಂತ್ರ, ಕಾರ್ಮಿಕರಾದ ಸುನೀಲ, ರಾಜು, ಶಿವಾನಂದ, ದಿನೇಶ ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು, ನಾಪತ್ತೆಯಾದ ಸಂದೀಪ್ ಎಂಬಾತನಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಯಲ್ಲಾಪುರದಿಂದ ಪಣಸಗುಳಿಗೆ ಚೀರೇಕಲ್ಲು ಸಾಗಿಸಿ ಮರಳಿ ಬರುವಾಗ ನೀರಿನ ಸೆಳತಕ್ಕೆ ಲಾರಿ ಕೊಚ್ಚಿ ಹೋಗಿದೆ. ತಾತ್ಕಾಲಿಕ ಸೇತುವೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತಿದ್ದರೂ ಭಂಡ ಧೈರ್ಯದಿಂದ ಚಾಲಕ ಲಾರಿಯನ್ನು ಚಾಲನೆ ಮಾಡಿದ್ದರಿಂದ ನದಿಗೆ ಲಾರಿ ಮಗುಚಿ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.

ಇದನ್ನೂ ಓದಿ | KPTCL Exam Scam | ಮತ್ತೆ ಮೂವರು ಆರೋಪಿಗಳ ಸೆರೆ, ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

Exit mobile version