Site icon Vistara News

ತಂಗಿ ತಂಟೆಗೆ ಬರಬೇಡ ಎಂದರೂ ಮಾತು ಕೇಳದವನ 50 ಬಾರಿ ಇರಿದು ಕೊಂದ ಅಣ್ಣ

Murder

ಚಿಕ್ಕಬಳ್ಳಾಪುರ: ತಂಗಿಯನ್ನು ಚುಡಾಯಿಸಿದ ಯುವಕನನ್ನು ಅಣ್ಣ, ತನ್ನ ಸ್ನೇಹಿತನೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂದನ್​ (21) ಹತ್ಯೆಯಾದ ಯುವಕ. ದರ್ಶನ್​​ ಕೊಲೆ ಮಾಡಿದ ಹುಡುಗ ಮತ್ತು ಆಶ್ರಯ್​ ಈ ಕೊಲೆಗೆ ಸಹಾಯ ಮಾಡಿದವನು. ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡಿ ಎಂಬಲ್ಲಿ.

ನಂದನ್​ ಚಿಕ್ಕಬಳ್ಳಾಪುರದ ಕೋಟೆ ಬಡಾವಣೆ ನಿವಾಸಿಯಾಗಿದ್ದು ದರ್ಶನ್​​ನ ತಂಗಿಗೆ ಚುಡಾಯಿಸುತ್ತಿದ್ದ ಎನ್ನಲಾಗಿದೆ. ತನ್ನ ತಂಗಿ ತಂಟೆಗೆ ಬರಬೇಡ ಎಂದು ನಂದನ್​ಗೆ ದರ್ಶನ್​ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೂ ಆತ ಮಾತು ಕೇಳಿರಲಿಲ್ಲ. ಇದರಿಂದ ರೊಚ್ಚಿಗೆದ್ದ ದರ್ಶನ್​, ತನ್ನ ಸ್ನೇಹಿತ ಆಶ್ರಯ್​ ಜತೆ ಸೇರಿ ನಂದನ್​ಗೆ 50ಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದಾನೆ. ಇಬ್ಬರೂ ಹುಡುಗರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಗೋಲ್ಡ್‌ ರಿಕವರಿಗೆ ಬಂದಿದ್ದ ತಮಿಳುನಾಡು ಪೊಲೀಸರಿಗೆ ದಿಗ್ಬಂಧನ ಹಾಕಿದ ಚಿಕ್ಕಬಳ್ಳಾಪುರ ಜ್ಯುವೆಲರಿ ಮಾಲೀಕರು

Exit mobile version