Site icon Vistara News

ಊರ ಜಾತ್ರೆ ಸಂಭ್ರಮದ ಮಧ್ಯೆ ಮನೆಯೊಂದರಲ್ಲಿ ನಡೆಯಿತು ಕೊಲೆ; ಪತಿಯ ಕತೆ ಮುಗಿಸಿದ ಪತ್ನಿ, ಮಗನ ಸಾಥ್​

A woman murdered her husband with the help of son in Belagavi

#image_title

ಬೆಳಗಾವಿ: ಊರೆಲ್ಲ ಜಾತ್ರೆಯ ಸಂಭ್ರಮದಲ್ಲಿ ಇದ್ದ ಸಂದರ್ಭದಲ್ಲಿ, ಮನೆಯೊಂದರಲ್ಲಿ ಭೀಕರ ಕೊಲೆ (Belagavi Murder)ಯೇ ನಡೆದುಹೋಯಿತು. ಪತ್ನಿ ತನ್ನ ಮಗನೊಂದಿಗೆ ಸೇರಿ ಗಂಡನನ್ನೇ ಕೊಂದಿದ್ದಾಳೆ. ಅಂದಹಾಗೇ, ಈ ಘಟನೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದಲ್ಲಿ. ಮೇ 28ರಂದು ಮುಂಜಾನೆಯೇ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯ ಹೆಸರು ಚಂದ್ರಕಾಂತ್​ ಮಾವರಕರ್​ (42) ಎಂದಾಗಿದ್ದು, ಈತನ ಪತ್ನಿ ಸಾವಿತ್ರಿ ಮಾವರಕರ್​ ಮತ್ತು ಪುತ್ರ ಸುನೀಲ್​ ಮಾವರಕರ್​ ಸೇರಿ ಹತ್ಯೆಗೈದಿದ್ದಾರೆ. ಚಂದ್ರಕಾಂತ್​ ಕುಡಿದು ಬಂದು, ಪತ್ನಿ ಸಾವಿತ್ರಿ ಜತೆ ಜಗಳ ತೆಗೆದಿದ್ದ. ಇದೇ ವೇಳೆ ಇವರಿಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಮಗನೂ ಮಧ್ಯ ಬಂದಿದ್ದ. ಈ ಜಗಳ ವಿಕೋಪಕ್ಕೆ ಹೋಗಿ, ಸಾವಿತ್ರಿ ಮತ್ತು ಸುನೀಲ್ ಸೇರಿ ಚಂದ್ರಕಾಂತ್ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದಾರೆ.

ಇದನ್ನೂ ಓದಿ: Farmer Suicide: ಸಾಲಭಾದೆ ತಾಳದೆ ಇಬ್ಬರು ರೈತರ ಆತ್ಮಹತ್ಯೆ

ರಕ್ತದ ಮಡುವಲ್ಲಿ ಬಿದ್ದಿದ್ದ ಚಂದ್ರಕಾಂತ್​ನನ್ನು ಸ್ಥಳೀಯರೆಲ್ಲ ಸೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಂದ್ರಕಾಂತ್​​ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಭೇಟಿ ಕೊಟ್ಟ ಮೂಡಲಗಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿದ್ದಾರೆ. ತಾಯಿ ಮತ್ತು ಮಗ ಇಬ್ಬರನ್ನೂ ಬಂಧಿಸಿದ್ದಾರೆ. ಊರಲ್ಲಿ ದ್ವಾಮವ್ವ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರೆ ನಡೆಯುತ್ತಿತ್ತು. ಇದು 12 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಾಗಿದ್ದು, ಭರ್ಜರಿಯಾಗಿ ಉತ್ಸವ ನಡೆಯುತ್ತದೆ. ಹೀಗೆ ಜಾತ್ರೆ ಶುರುವಾದ ದಿನದಿಂದಲೂ ಚಂದ್ರಕಾಂತ್​ ಪ್ರತಿದಿನ ಕುಡಿದು, ಮನೆಗೆ ಹೋಗಿ ಜಗಳ ತೆಗೆಯುತ್ತಿದ್ದ. ಇದರಿಂದ ಸಾವಿತ್ರಿ ಮತ್ತು ಸುನೀಲ್ ಬೇಸತ್ತು ಹೋಗಿದ್ದರು ಎನ್ನಲಾಗಿದೆ.

Exit mobile version