Site icon Vistara News

BJP Ticket Fraud: ಬಿಜೆಪಿ ಟಿಕೆಟ್ ವಂಚನೆ ಕೇಸ್‌ನ ಎ 1 ಆರೋಪಿ ನಾಪತ್ತೆ

bjp ticket fraud case in kottur

ವಿಜಯನಗರ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಎ-1 ಆರೋಪಿ ರೇವಣಸಿದ್ದಪ್ಪ ನಾಪತ್ತೆಯಾಗಿದ್ದಾರೆ. ಬಿಜೆಪಿ ಮಾಜಿ ಮುಖಂಡ, ಕೆಆರ್‌ಪಿಪಿ ವಿಜಯನಗರ ಜಿಲ್ಲಾಧ್ಯಕ್ಷ ಆಗಿರುವ ರೇವಣಸಿದ್ದಪ್ಪ ಅವರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ನಿವೃತ್ತ ಎಂಜಿನಿಯರ್ ಶಿವಮೂರ್ತಿಗೆ ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಾಲ್ವರ ತಂಡ ಒಟ್ಟು 2.55 ಕೋಟಿ ರೂ. ಪಡೆದು ವಂಚಿಸಿತ್ತು ಎಂಬ ಆರೋಪವಿದೆ. ಹೀಗಾಗಿ ಶಿವಮೂರ್ತಿ ಅವರು ನೀಡಿದ ದೂರಿನ ಮೇರೆಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ಭಾನುವಾರವಷ್ಟೇ ದೂರುದಾರ ಶಿವಮೂರ್ತಿ ಮನೆಗೆ ತೆರಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಬಳಿಕ ಎರಡನೇ ಆರೋಪಿ ಶೇಖರ್‌ನಿಂದ ಹೆಚ್ಚಿನ ಮಾಹಿತಿಗಾಗಿ ಖಾಕಿ ಟೀಂ ಪುತ್ತೂರಿಗೆ ತೆರಳಿತ್ತು. ಕಳೆದ ಎರಡು ದಿನಗಳಿಂದ ನಾಪತ್ತೆಯಾದ ಪ್ರಮುಖ ಆರೋಪಿ ರೇವಣಸಿದ್ದಪ್ಪ ಹುಡುಕಾಟಕ್ಕೆ ಪತ್ಯೇಕ ತಂಡ ರಚಿಸಲಾಗಿದೆ.

ಇದನ್ನೂ ಓದಿ | CM Siddaramaiah : ಹಿಂದಿನ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿಲ್ಲ; ಅವರ ಮನೆ ಹಾಳಾಗ ಎಂದ ಸಿದ್ದರಾಮಯ್ಯ

ಕೊಟ್ಟೂರಿನ ನಿವಾಸಿ ಆಗಿರುವ ಎ 1 ಆರೋಪಿ ರೇವಣಸಿದ್ದಪ್ಪ, ಎಂಜಿನಿಯರ್‌ ಶಿವಮೂರ್ತಿ ಬಳಿ ಒಂದು ಕೋಟಿ ಹಣ ಪಡೆದು ಮನೆ ಖರೀದಿ ಮಾಡಿದ್ದಾನೆ ಎಂಬ ಮಾಹಿತಿ ಇದೆ. ಹೀಗಾಗಿ ರೇವಣಸಿದ್ದಪ್ಪ ಮನೆ ಖರೀದಿ ಬಗ್ಗೆಯೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. 1 ಕೋಟಿ ಹಣದಲ್ಲಿ ರೇವಣಸಿದ್ದಪ್ಪ 50 ಲಕ್ಷ, ಮೋಹನ್ 50 ಲಕ್ಷ ಹಂಚಿಕೊಂಡಿ ಮಾಹಿತಿ ಇದೆ. ಇನ್ನು 90 ಲಕ್ಷ ರೂ.ಗಳನ್ನು ಪುತ್ತೂರು ಶೇಖರ್ ಪಡೆದಿದ್ದಾನೆ ಅಂತ ಶಿವಮೂರ್ತಿ ಹೇಳಿದ್ದಾರೆ. ಒಂದು ಕೋಟಿ ರೂ.ಗಳನ್ನು ಕೊಟ್ಟೂರಿನ ಇಬ್ಬರು ಮುಖಂಡರು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 2.55 ಕೋಟಿ ರೂ. ವಂಚನೆ

ದೂರುದಾರ ಶಿವಮೂರ್ತಿ

ಹಿಂದು ಕಾರ್ಯಕರ್ತೆ ಕುಂದಾಪುರದ ಚೈತ್ರಾಳ ಮೋಸದ ಕೇಸ್ ರೀತಿಯೇ ಈಗ ಬಿಜೆಪಿ ಟಿಕೆಟ್‌ ವಂಚನೆಯ (BJP Ticket Fraud) ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂದ ಎಫ್‌ಐಆರ್‌ ದಾಖಲಾಗಿದೆ (FIR registered). ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ (Hagaribommanahalli SC reserved assembly constituency) ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಅವರಿಗೆ ನಾಲ್ವರ ತಂಡವು ವಂಚನೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ದೂರುದಾರ ನಿವೃತ್ತ ಎಂಜಿನಿಯರ್ ಶಿವಮೂರ್ತಿ, ಪಕ್ಷದ ಚಟುವಟಿಕೆಗಾಗಿ 65 ಲಕ್ಷ ರೂಪಾಯಿಯನ್ನು ಖರ್ಚು ಮಾಡಿಸಲಾಗಿದೆ. ಅಲ್ಲದೆ, ಟಿಕೆಟ್‌ ಕೊಡಿಸುವುದಾಗಿ ವಂಚಕರು ತಮ್ಮ ಬಳಿ ಒಟ್ಟು 1.90 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಒಟ್ಟು 2.55 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು.

ಈ ಪ್ರಕರಣ ಸಂಬಂಧ ಅಕ್ಟೋಬರ್‌ 19ರಂದು ಶಿವಮೂರ್ತಿ ಅವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | BJP Politics : ಶೋಭಾ ಕರಂದ್ಲಾಜೆಗೆ ಫಿಕ್ಸ್‌ ಆಯ್ತಾ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ? ಸಿಂಹ ಆಹ್ವಾನ ಕೊಟ್ರೆ, ಶಾ ವಿಶ್‌ ಮಾಡಿದ್ರು!

ಕೊಟ್ಟೂರಿನ ಕಟಾರಿ ಆಪ್ಟಿಕಲ್ ಮಾಲೀಕ ಮೋಹನ್ ಕಟಾರಿಯಾ, ಬಿಜೆಪಿ ಮಾಜಿ ಮುಖಂಡ, ಹಾಲಿ ಜನಾರ್ದನ ರೆಡ್ಡಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಹಾಗೂ ಪುತ್ತೂರು ಮೂಲದ ಶೇಖರ್ ಪುರುಷೋತ್ತಮ್ ನಿರ್ಲಕಟ್ಟೆ (ರಾಜಶೇಖರ್) ಎಂಬುವವರಿಂದ ವಂಚನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು 1.90 ಕೋಟಿ ರೂಪಾಯಿಯನ್ನು ಇದುವರೆಗೆ ಪಡೆಯಾಗಿದೆ. ಅದರಲ್ಲಿ 65 ಲಕ್ಷ ರೂಪಾಯಿಯನ್ನು ಪಕ್ಷದ ಬೇರೆ ಬೇರೆ ವಿಚಾರಕ್ಕೆ ಖರ್ಚು ಮಾಡಿಸಲಾಗಿದೆ ಎಂದು ಆರೋಪ ಮಾಡಿರುವ ಶಿವಮೂರ್ತಿ, ತಾವು ಕೊಟ್ಟಿರುವ ಎಲ್ಲ ಹಣದ ದಾಖಲೆ ಸಮೇತ ದೂರು ನೀಡಿದ್ದಾರೆ. ಅಲ್ಲದೆ, ಈಗ ಹಣವನ್ನು ವಾಪಸ್ ಕೇಳಿದ್ದಕ್ಕೆ ಧಮಕಿ ಹಾಕುತ್ತಿದ್ದಾರೆ ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಟಿಕೆಟ್‌ ಅನೌನ್ಸ್‌ ಬಳಿಕ ವರಸೆ ಬೇರೆ

ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್ ಅನ್ನು ಬಲ್ಲಾಹುಣ್ಸಿ ರಾಮಣ್ಣ ಎಂಬುವವರಿಗೆ ಅನೌನ್ಸ್ ಆಗಿತ್ತು. ಟಿಕೆಟ್ ಘೋಷಣೆ ಆಗುತ್ತಿದ್ದಂತೆ ನಿವೃತ್ತ ಎಂಜಿನಿಯರ್ ಶಿವಮೂರ್ತಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹಾಗಾಗಿ ಅವರು ವಂಚಕರಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ, ಹಣ ಕೊಡುವುದಿಲ್ಲ, ಏನ್ ಮಾಡುತ್ತೀಯೋ ಮಾಡು. ನಿನಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಅಂತ ಬೆದರಿಕೆ ಹಾಕಿದ್ದಾರೆ ಎಂದು ಶಿವಮೂರ್ತಿ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Road Accident : ತುಮಕೂರಲ್ಲಿ ಅಪಘಾತಕ್ಕೆ ವಿಕಲಚೇತನ ಬಲಿ; ಶಿರಸಿಯಲ್ಲಿ ಖಾಸಗಿ-ಸಾರಿಗೆ ಬಸ್‌ ಡಿಕ್ಕಿ

90 ಲಕ್ಷ ರೂ. ಚೆಕ್‌ ಬೌನ್ಸ್‌

ಟಿಕೆಟ್ ಸಿಗದಿದ್ದಾಗ ಹಣ ವಾಪಸ್ ಕೇಳಿದೆ. ಅದಕ್ಕೆ 90 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಅಕ್ಟೋಬರ್‌ 10ರ ದಿನಾಂಕವನ್ನು ಹಾಕಲಾಗಿತ್ತು. ಆದರೆ, ಚೆಕ್‌ ಬೌನ್ಸ್‌ ಆಗಿದೆ ಎಂದು ಸಹ ಶಿವಮೂರ್ತಿ ಆರೋಪ ಮಾಡಿದ್ದಾರೆ.

Exit mobile version