Site icon Vistara News

Abdul nasir Madani : ಬೆಂಗಳೂರು ಜೈಲಿನಲ್ಲಿದ್ದ ಅಬ್ದುಲ್‌ ನಾಸಿರ್‌ ಮದನಿ ಕೇರಳದ ಮನೆಗೆ!

Abdul Nasir Madani

#image_title

ಬೆಂಗಳೂರು: 2008ರ ಬೆಂಗಳೂರು ಸ್ಫೋಟದ (2008 Bangalore Blast) ರೂವಾರಿ, ಹಲವಾರು ಕ್ರಿಮಿನಲ್‌ ಪ್ರಕರಣಗಳನ್ನು ಹೊತ್ತಿರುವ ಪಿಡಿಪಿ ಪಕ್ಷದ (PDP President) ಅಧ್ಯಕ್ಷ ಅಬ್ದುಲ್‌ ನಾಸಿರ್‌ ಮದನಿ (Abdul Nasir Madani) ಬೆಂಗಳೂರು ಜೈಲಿನಿಂದ ಕೇರಳದ (Bangalore to Kerala) ಮನೆಗೆ ಹೋಗಿದ್ದಾನೆ.

ಬೆಂಗಳೂರು ಜೈಲಿನಲ್ಲಿರುವ (Bangalore Jail) ಆತ ಸೋಮವಾರ ಸಂಜೆ 6.15ರ ವಿಮಾನದಲ್ಲಿ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಿದ್ದಾನೆ. ಮದನಿಯನ್ನು ಕರೆದೊಯ್ಯಲು ಆತನ ಪತ್ನಿ ಮತ್ತು ಇತರರು ಆಗಮಿಸಿದ್ದರು. ಅವರೆಲ್ಲ ಮದನಿಯನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿ ವೀಲ್‌ ಚೆಯರ್‌ ಮೂಲಕ ಕರೆದೊಯ್ದು ವಿಮಾನ ಹತ್ತಿಸಿದ್ದಾರೆ. ಮದನಿಯನ್ನು ಕೇರಳದ ಮನೆಗೆ ಕರೆದೊಯ್ಯಲಾಗುತ್ತಿದ್ದು, ಆತನ ಭದ್ರತೆಗೆ ಒಬ್ಬ ಎಸ್‌ಐ, ಮೂವರು ಕಾನ್‌ಸ್ಟೇಬಲ್‌ಗಳು, ಒಬ್ಬ ನಿಯೋಜನೆ ಮಾಡಲಾಗಿದೆ.

ಮದನಿಯನ್ನು ಬಿಟ್ಟಿದ್ಯಾಕೆ?

ಹಾಗಿದ್ದರೆ ಅಬ್ದುಲ್‌ ನಾಸಿರ್‌ ಮದನಿಯನ್ನು ಕೇರಳದ ಮನೆಗೆ ಹೋಗಲು ಬಿಟ್ಟಿದ್ಯಾಕೆ, ಬಿಟ್ಟಿದ್ದು ಯಾರು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಅಲ್ವೇ?

ಎಲ್ಲರಿಗೂ ಗೊತ್ತಿರುವ ಹಾಗೆ ಅಬ್ದುಲ್‌ ನಾಸಿರ್‌ ಮದನಿ ಎನ್ನುವುದು ದೇಶದ ಹಲವು ಕಡೆಗಳಲ್ಲಿ ಬಾಂಬ್‌ ಸ್ಫೋಟ, ವಿಧ್ವಂಸಕ ಕೃತ್ಯಗಳಲ್ಲಿ ಆರೋಪಿಯಾಗಿ ಕೇಳಿ ಬಂದ ಹೆಸರು. ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಎಂಬ ಪಕ್ಷದ ಅಧ್ಯಕ್ಷ.

2008ರ ಜುಲೈ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಪಕ್ಕದಲ್ಲಿ ಒಂಬತ್ತು ಕಡಿಮೆ ತೀವ್ರತೆಯ ಬಾಂಬ್‌ಗಳು ಸ್ಫೋಟಿಸಿದ್ದವು. ಇದರಲ್ಲಿ ಒಬ್ಬ ಸಾವನ್ನಪ್ಪಿದ್ದು, 9 ಮಂದಿಗೆ ಗಾಯಗಳಾಗಿತ್ತು. ಪೊಲೀಸರ ತನಿಖೆಯಲ್ಲಿ ಅಬ್ದುಲ್‌ ನಾಸಿರ್‌ ಮದನಿಯೇ ಈ ಸ್ಫೋಟದ ಮಾಸ್ಟರ್‌ಮೈಂಡ್‌ ಎಂಬುದು ಬಯಲಾಗಿತ್ತು. ಹಾಗಾಗಿ ಆತನನ್ನು ಕಸ್ಟಡಿಗೆ ಪಡೆಯಲಾಗಿತ್ತು. ನಂತರ ವಿಚಾರಣೆಗಳು ನಡೆಯುತ್ತಲೇ ಇದೆ. ಆತ ಬೆಂಗಳೂರಿನ ಜೈಲಿನಲ್ಲಿದ್ದಾನೆ.

ಅಬ್ದುಲ್‌ ನಾಸಿರ್‌ ಮದನಿಗೆ ಈಗ 57 ವರ್ಷ. ಆದರೆ, ಈಗಾಗಲೇ ಒಂದು ಸ್ವಲ್ಪ ಹಣ್ಣಾಗಿದ್ದಾನೆ. ದೀರ್ಘ ಕಾಲದಿಂದ ಜೈಲಿನಲ್ಲಿರುವ ಆತನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅದರ ಜತೆಗೆ ಆತನ ತಂದೆಯ ಆರೋಗ್ಯವೂ ಹದಗೆಟ್ಟಿದೆ. ಹೀಗಾಗಿ ಕೇರಳದಲ್ಲಿರುವ ಮನೆಗೆ ಹೋಗಿ ತಂದೆಯವರನ್ನು ನೋಡಿಕೊಂಡು ಬರುತ್ತೇನೆ, ಜತೆಗೆ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಬರುತ್ತೇನೆ ಎಂದು ಕೇಳಿಕೊಂಡಿದ್ದ.

ತನಗೆ ಮನೆಗೆ ಹೋಗಿ ಬರಲು ಅನುಕೂಲವಾಗುವಂತೆ ಜಾಮೀನಿನ ಷರತ್ತುಗಳಲ್ಲಿ ಮಾರ್ಪಾಡುಗಳನ್ನು ಮಾಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದ. ಮದನಿ ಮತ್ತು ತಂದೆಯ ಆರೋಗ್ಯ ಸ್ಥಿತಿಗಳೆರಡರ ಬಗ್ಗೆಯೂ ವೈದ್ಯಕೀಯ ವರದಿಗಳನ್ನು ಪಡೆದ ಸು.ಕೋರ್ಟ್‌ ಜೂನ್‌ 26ರಿಂದ ಜುಲೈ 07ರವರೆಗೆ 12 ದಿನ ಕೇರಳದ ಮನೆಯಲ್ಲಿರಲು ಕೋರ್ಟ್‌ ಅವಕಾಶ ನೀಡಿದೆ. ಮತ್ತು ಆತನನ್ನು ಕೇರಳಕ್ಕೆ ಕರೆದುಕೊಂಡು ಹೋಗಿ ವಾಪಪ್‌ ಕರೆದು ತರುವ ಜವಾಬ್ದಾರಿಯನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಿದೆ.

ನಿಜವೆಂದರೆ, ಕರ್ನಾಟಕದ ಭಯೋತ್ಪಾದನೆ ನಿಗ್ರಹ ವಿಭಾಗ ಮದನಿಯ ಮನವಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಮದನಿಯ ಮೇಲಿರುವುದು ಸಣ್ಣ ಪ್ರಕರಣವೇನಲ್ಲ. ದೇಶದ ಭದ್ರತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರಬಹುದಾದ ಪ್ರಕರಣ. ಒಂದೊಮ್ಮೆ ಆತನಿಗೆ ಜಾಮೀನು ನೀಡಿದರೆ ಆತ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಈ ಪ್ರಕರಣದಲ್ಲಿ ಇನ್ನೂ ಆರು ಮಂದಿ ಬಂಧಿಸಲ್ಪಟ್ಟಿಲ್ಲ. ಅವರು ಮದನಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಜತೆಗೆ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ ಒಡ್ಡುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ, ಸುಪ್ರೀಂಕೋರ್ಟ್‌ ಈ ವಾದವನ್ನು ಒಪ್ಪದೆ ಮನೆಗೆ ಹೋಗಿ ಬರಲು ಅವಕಾಶ ನೀಡಿದೆ.

ಈಗಾಗಲೇ 6.76 ಲಕ್ಷ ರೂ. ಪಾವತಿ

ಮದನಿಯನ್ನು ಕೇರಳದ ಮನೆಗೆ ಕರೆದೊಯ್ದು ಮರಳಿ ಕರೆತರುವ ಜವಾಬ್ದಾರಿಯನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಿರುವ ಸುಪ್ರೀಂಕೋರ್ಟ್‌ ಹೀಗೆ ಕರೆದೊಯ್ದು ಮರಳಿ ಕರೆ ತರಲು ಬೇಕಾಗುವ ಖರ್ಚನ್ನು ಮದನಿಯೇ ಭರಿಸಬೇಕು ಎಂದು ಸೂಚಿಸಿತ್ತು. ಇದರ ವೆಚ್ಚವಾದ 6,76,101 ರೂ.ಯನ್ನು ಈಗಾಗಲೇ ಮದನಿ ಪಾವತಿಸಿದ್ದಾನೆ.

ಮದನಿ ಈಗ ಹೋಗುತ್ತಿರುವುದು ಕೊಲ್ಲಂ ಜಿಲ್ಲೆಯ ಅನ್ವರ್ ಸಿರಿ ಸಸ್ತುಂಮಕುಟ ಎಂಬ ಊರಿಗೆ. ಅಲ್ಲಿ ಆತನ ತಂದೆಯನ್ನು ನೋಡುವುದರ ಜತೆಗೆ ತನ್ನ ಆರೋಗ್ಯಕ್ಕೂ ಚಿಕಿತ್ಸೆ ಪಡೆಯಲಿದ್ದಾನೆ ಮದನಿ.

ಇದನ್ನೂ ಓದಿ: Abdul Nasser Madani: ಬೆಂಗಳೂರು ಸರಣಿ ಸ್ಫೋಟದ ರೂವಾರಿಗೆ ಒಂದು ತಿಂಗಳು ಕೇರಳಕ್ಕೆ ತೆರಳಲು ಸುಪ್ರೀಂ ಕೋರ್ಟ್‌ ಅನುಮತಿ

ಮದನಿಗೆ ಜಾಮೀನು ಇದು ಮೊದಲೇನಲ್ಲ

ಮದನಿಗೆ ಜಾಮೀನು ಸಿಗುತ್ತಿರುವುದು ಆತ ಕೇರಳಕ್ಕೆ ಹೋಗುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆಯೂ ಒಮ್ಮೆ ಅನಾರೋಗ್ಯದ ಕಾರಣಕ್ಕಾಗಿ ಆತನಿಗೆ ಜಾಮೀನು ನೀಡಲಾಗಿತ್ತು. ಆದರೆ, ಬೆಂಗಳೂರು ಬಿಟ್ಟು ಹೊರಹೋಗಬಾರದು ಎಂದು ಸೂಚಿಸಲಾಗಿತ್ತು.
– 2017ರಲ್ಲಿ ಮಗನ ಮದುವೆಯ ನಿಮಿತ್ತ ಆತನಿಗೆ 12 ದಿನದ ಮಟ್ಟಿಗೆ ಕೇರಳಕ್ಕೆ ಹೋಗಲು ಅನುಮತಿ ನೀಡಲಾಗಿತ್ತು. ರಾಜ್ಯ ಸರ್ಕಾರ ಆತನ 12 ದಿನಗಳ ಖರ್ಚಿಗೆ 15 ಲಕ್ಷ ನೀಡಬೇಕು ಎಂದು ಕೇಳಿತ್ತು. ಬಳಿಕ ಸುಪ್ರೀಂಕೋರ್ಟ್‌ ಮಧ್ಯ ಪ್ರವೇಶ ಮಾಡಿದ ಬಳಿಕ ಅದನ್ನು 1.18 ಲಕ್ಷ ರೂ.ಗೆ ಇಳಿಸಿತ್ತು.

Exit mobile version