Site icon Vistara News

CID: ಪೊಲೀಸರ ಎದುರೇ ಕಟ್ಟಡದಿಂದ ಜಿಗಿದು ಮೃತಪಟ್ಟ ಆರೋಪಿ; ಪ್ರಕರಣ ಈಗ ಸಿಐಡಿಗೆ ವರ್ಗಾವಣೆ

#image_title

ಬೆಂಗಳೂರು: ಇಲ್ಲಿನ ಬೊಮ್ಮನಹಳ್ಳಿ ಬೇಗೂರು ಸಮೀಪ ಆರೋಪಿಯೊಬ್ಬ, ಪೊಲೀಸರ ಸಮ್ಮುಖದಲ್ಲೇ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದ. ಇದೀಗ ಮೃತನ ಕುಟುಂಬಸ್ಥರು ಪೊಲೀಸರೇ ತಳ್ಳಿ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಕ್ಷಿಪ್ತವಾದ ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಮೊಹಮ್ಮದ್ ತಾಹೀರ್ ಹುಸೇನ್ (31) ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟವನು. ಗಾಂಜಾ ಹಾಗೂ ಕಳ್ಳತನದ ಆರೋಪಿಯಾಗಿದ್ದ ಮೊಹಮ್ಮದ್‌ನನ್ನು ದೂರಿನ ಸಂಬಂಧ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದರು. ಮೊಹಮ್ಮದ್ ತಾಹೀರ್ ಹುಸೇನ್‌ನನ್ನು ವಶಕ್ಕೆ ಪಡೆಯಲು ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯ ನಾಲ್ವರು ಸಿಬ್ಬಂದಿ ತೆರಳಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಕಲ್ಲು ಕ್ವಾರಿ ಬ್ಲಾಸ್ಟ್‌ ಆಗಿ ಒಬ್ಬ ಮೃತ್ಯು, ಇಬ್ಬರು ಗಂಭೀರ; ಕ್ವಾರಿ ಮಾಲೀಕ ಪರಾರಿ

ಈ ವೇಳೆ ನಾಲ್ಕನೇ ಮಹಡಿಯ ಟೆರೇಸ್‌ನಲ್ಲಿದ್ದ ಮೊಹಮ್ಮದ್‌ನನ್ನು ವಶಕ್ಕೆ ಪಡೆಯಲು ಹೋದಾಗ ಭಯಕ್ಕೆ ಮಹಡಿಯಿದ್ದ ಜಿಗಿದು ಮೃತಪಟ್ಟಿದ್ದಾನೆ ಪೊಲೀಸರು ತಿಳಿಸಿದ್ದಾರೆ. ಆದರೆ ಮೃತನ ಸಂಬಂಧಿಕರು ವಶಕ್ಕೆ ಪಡೆಯಲು ಬಂದಿದ್ದ ಬೊಮ್ಮನಹಳ್ಳಿ ಠಾಣೆಯ ನಾಲ್ವರು ಸಿಬ್ಬಂದಿ ಹಲ್ಲೆ ನಡೆಸಿ ಅವರೇ ತಳ್ಳಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version