Site icon Vistara News

‌ಸಚಿವ ಆನಂದ್‌ ಸಿಂಗ್ ವಿರುದ್ಧ ಜೀವ ಬೆದರಿಕೆ ಆರೋಪ; ಪೆಟ್ರೋಲ್‌ ಸುರಿದುಕೊಂಡು 9 ಮಂದಿ ಪ್ರತಿಭಟನೆ

ಆನಂದ್‌ ಸಿಂಗ್

ಹೊಸಪೇಟೆ: ಸಚಿವ ಆನಂದ್ ಸಿಂಗ್‌ ಅವರು ಮನೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಒಂದೇ ಕುಟುಂಬದ 9 ಮಂದಿ ಪೆಟ್ರೋಲ್ ಸುರಿದುಕೊಂಡು ಪ್ರತಿಭಟಿಸಿದ್ದಾರೆ. ಹೊಸಪೇಟೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹೊಸಪೇಟೆಯ 6ನೇ ವಾರ್ಡ್‌ನ ಸುಣ್ಣದ ಬಟ್ಟಿ ಪ್ರದೇಶದ‌ ನಿವಾಸಿ ಡಿ.ಪೋಲಪ್ಪ ಕುಟುಂಬಸ್ಥರಿಂದ ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. “ಸಚಿವ ಆನಂದ್ ಸಿಂಗ್ ಅವರು ನಮ್ಮ ಮನೆಗೆ ಬೆಂಕಿ ಹಾಕಿ ಸುಡುತ್ತೇನೆ ಎಂದು ಬೆದರಿಸಿದ್ದಾರೆ. ಹೀಗಾಗಿ ನಾವು ಪೆಟ್ರೋಲ್ ಸುರಿದುಕೊಂಡಿದ್ದೇವೆ, ಸಚಿವರು ಬಂದು ಬೆಂಕಿ ಹಚ್ಚಿ ನಮ್ಮನ್ನು ಕೊಲ್ಲಲಿ” ಎಂದು ಆಕ್ರೋಶ ಹೊರಹಾಕಿದರು.

“ನೀವು ಇರುವುದು ನಮ್ಮ ಜಾಗ, ಮನೆ ಖಾಲಿ ಮಾಡಬೇಕು. ಇಲ್ಲವಾದಲ್ಲಿ ಮನೆಗೆ ಬೆಂಕಿ ಹಚ್ಚಿ ಸುಡುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಬೆದರಿಕೆ ಹಾಕಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಮನೆ ಖಾಲಿ ಮಾಡಿ ಎಂಬ ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೆವು. ಆದರೆ ಯಾವುದೇ ಕ್ರಮವಾಗಿಲ್ಲ” ಎಂದು ಡಿ.ಪೋಲಪ್ಪ ಆರೋಪಿಸಿದ್ದಾರೆ.

ಇದನ್ನೂ ಓದಿ | Gruesome Murders | ಪೂಜೆಗೆ ಅಡ್ಡಿ ಮಾಡಿದ್ದಕ್ಕೆ ಹೆಂಡತಿ, ತಾಯಿ, ಮೂವರು ಮಕ್ಕಳ ಕತ್ತು ಸೀಳಿ ಕೊಂದ!

Exit mobile version