Site icon Vistara News

Anekal News: ಇಬ್ಬರು ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣು; ಪತ್ನಿಯ ಹೈಫೈ ಜೀವನಕ್ಕೆ ಬಲಿಯಾದ ಮೂವರು

suicide case

ಆನೇಕಲ್: ಪತ್ನಿಯ ಕಿರುಕುಳದಿಂದ (harassment) ಬೇಸತ್ತ ಪತಿಯೊಬ್ಬ ತನ್ನಿಬ್ಬರ ಮಕ್ಕಳನ್ನು ಹತ್ಯೆ ಮಾಡಿ ತಾನು ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪ ಸಮೀಪದ ನಿರ್ಮಣ ಬಡಾವಣೆಯಲ್ಲಿ ನಡೆದಿದೆ. ಹರೀಶ್ (35), ಪ್ರಜ್ವಲ್ (6), ರಿಷಬ್(4) ಮೃತದುರ್ದೈವಿಗಳು.

ಇದೇ ತಿಂಗಳ 10ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹರೀಶ್‌ ಬಾಡಿಗೆ ಮನೆಯಲ್ಲಿ ಮಕ್ಕಳಿಗೆ ನೇಣು ಬಿಗಿದು ಕೊಂದು ಬಳಿಕ ತಾನು ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೂ ಮೊದಲು ಸ್ನೇಹಿತರೊಬ್ಬರಿಗೆ ಕಾಲ್‌ ಮಾಡಿ, ತಾನು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ್ದಾರೆ.

ತನಗೆ ಬರಬೇಕಾದ ಹಣ ಮತ್ತು ಎಲ್ಐಸಿ ಬಾಂಡ್ ಅನ್ನು ಪತ್ನಿಗೆ ನೀಡುವಂತೆ ಹೇಳಿ ಕಾಲ್‌ ಕಟ್‌ ಮಾಡಿದ್ದ. ಕೂಡಲೇ ಹರೀಶ್ ಇರುವ ಲೊಕೇಷನ್ ಹುಡುಕಾಟ ನಡೆಸಿದಾಗ ಕೊನೆಗೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದೆ.

ಅಂದಹಾಗೇ ಹರೀಶ್‌ 2007ರಲ್ಲಿ ಅಕ್ಕನ ಮಗಳು ಅನನ್ಯಳ ಜತೆ ಪ್ರೇಮ ವಿವಾಹವಾಗಿದ್ದ. ಆದರೆ ಪತ್ನಿಯ ಹೈವೈ ಜೀವನಕ್ಕೆ ಪದೇ ಪದೇ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಗಾರ್ವೇಬಾವಿ ಪಾಳ್ಯದಲ್ಲಿ ಪ್ರತ್ಯೇಕವಾಗಿ ವಾಸ ಇದ್ದರು. ಈ ನಡುವೆ 2015 ರಲ್ಲಿ ಹಿರಿಯ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯು ಆಗಿತ್ತು.

ಎಲ್ಲವೂ ಸರಿಯಾಯಿತು ಎನ್ನುವಾಗಲೇ 2021ರ ಬಳಿಕ ಪ್ರತ್ಯೇಕ ಮನೆ ಮಾಡಲು ಪತ್ನಿ ಅನನ್ಯ ಒತ್ತಾಯಿಸಿದ್ದಳು. ಕೊನೆಗೆ ಆಕೆಯ ಒತ್ತಾಯಕ್ಕೆ ಮಣಿದ ಹರೀಶ್‌, ಪ್ರತ್ಯೇಕ ಮನೆ ಮಾಡಿ ಮಕ್ಕಳೊಂದಿಗೆ ವಾಸವಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಮನೆ ಬಿಟ್ಟು ಪರ ಪುರುಷನೊಂದಿಗೆ ಪತ್ನಿ ಅನನ್ಯ ಪರಾರಿಯಾಗಿದ್ದಳು.

ಇದನ್ನೂ ಓದಿ: Accident News: 3ನೇ ಮಹಡಿಯಿಂದ ಬಿದ್ದು ಪೇಂಟರ್‌ ಸಾವು; ಆಂಬ್ಯುಲೆನ್ಸ್‌ ಬಾರದೆ ನಡು ರಸ್ತೆಯಲ್ಲೆ ಒದ್ದಾಡಿ ಪ್ರಾಣಬಿಟ್ಟ

ತಬ್ಬಲಿಯಾದ ಮಕ್ಕಳನ್ನು ಪೋಷಣೆ ಮಾಡುತ್ತಿದ್ದ ಹರೀಶ್‌ಗೆ, ಈ ನಡುವೆ ಪತ್ನಿ ಕಡೆಯಿಂದ ಪದೇಪದೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು. ನೀಡದಿದ್ದರೆ ಮನೆ ಬಳಿ ಬಂದು ರಂಪಾಟ ಮಾಡುತ್ತಿದ್ದಳು. ಅನನ್ಯಳ ಕಿರುಕುಳಕ್ಕೆ ಬೇಸತ್ತ ಹರೀಶ್‌ ಇತ್ತೀಚೆಗೆ ನೊಂದು ಹೋಗಿ, ಮಕ್ಕಳಿಗೂ ನೇಣು ಹಾಕಿ ಕೊಂದು, ತಾವು ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version