Site icon Vistara News

Anganawadi workers | ಪ್ರತಿಭಟನೆ ವೇಳೆ ಅನಾರೋಗ್ಯಕ್ಕೀಡಾದ ಅಂಗನವಾಡಿ ಕಾರ್ಯಕರ್ತೆ ನಿಧನ

anganawadi worker protest

ಶಿವಮೊಗ್ಗ: ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ವೇಳೆ ಅನಾರೋಗ್ಯಕ್ಕೊಳಗಾಗಿ ಊರಿಗೆ ಮರಳಿದ್ದ ಅಂಗನವಾಡಿ ಸಹಾಯಕಿ ಕೊನೆಯುಸಿರು ಎಳೆದಿದ್ದಾರೆ.

ಶಿಕಾರಿಪುರದ ಇಡುಕ್ಕಿನ ಹೊಸಕೊಪ್ಪದ ನೀಲಮ್ಮ ದಾನಪ್ಪ ಗೌಡ (58) ನಿಧನರಾದವರು. ಜ.18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೀಲಮ್ಮ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಊರಿಗೆ ಕರೆತಂದು ಚಿಕಿತ್ಸೆಯಲ್ಲಿದ್ದ ಅವರು ಜ.20ರಂದು ನಿಧನರಾಗಿದ್ದಾರೆ.

ನೀಲಮ್ಮ ಸಾವಿಗೆ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀಲಮ್ಮ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದಿದ್ದಾರೆ.

ಇದನ್ನೂ ಓದಿ | Anganawadi Workers: ಅಹೋರಾತ್ರಿ ಪ್ರತಿಭಟನೆಗೆ ಬಲವಂತದ ತಡೆ; ಮತ್ತೆ ಬರುತ್ತೇವೆ ಎಂದು ಎಚ್ಚರಿಕೆ ನೀಡಿದಅಂಗನವಾಡಿ ಕಾರ್ಯಕರ್ತೆಯರು

Exit mobile version