Site icon Vistara News

ಭೀಮಾತೀರದಲ್ಲಿ ಹರಿಯಿತು ರಕ್ತ; ಮತ್ತೊಬ್ಬ ಮಹಿಳೆಯ ಭೀಕರ ಹತ್ಯೆ

crime News

ವಿಜಯಪುರ: ಭೀಮಾತೀರದಲ್ಲಿ ಮತ್ತೊಬ್ಬರು ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ (Woman Murder). ಇಲ್ಲಿನ ಇಂಡಿ ಪಟ್ಟಣದ ರೇವಪ್ಪ ಮಡ್ಡಿಯಲ್ಲಿ, 40ವರ್ಷದ ರೇಣುಕಾ ವಾಘ್ಮೋರೆ ಕೊಲೆಯಾಗಿದೆ. ಭೀಮಾತೀರದಲ್ಲಿ ಗುಂಡಿನ ಸದ್ದು, ಹತ್ಯೆ, ಮಾರಕಾಸ್ತ್ರಗಳ ಪ್ರಯೋಗ ಹೊಸದಲ್ಲ. ಇದೀಗ ರೇಣುಕಾ ಅವರನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಭಯಾನಕವಾಗಿ ಇರಿದು ಕೊಂದಿದ್ದಾರೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಪ್ರಾರಂಭಿಸಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ಇದೇ ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ, ಹಾಡಹಗಲಲ್ಲೇ ದಿಲಶಾದ್ ಹವಾಲ್ದಾರ್ (31) ಎಂಬ ಶಿಕ್ಷಕಿಯನ್ನು ಕೊಲೆ ಮಾಡಲಾಗಿತ್ತು. ದುಷ್ಕರ್ಮಿಗಳು ಶಿಕ್ಷಕಿಯ ಮಗನ ಮೇಲೆ ಕೂಡ ದಾಳಿ ನಡೆಸಿ, ಆತ ಗಂಭೀರವಾಗಿ ಗಾಯಗೊಂಡಿದ್ದ. ಇನ್ನು ಈ ಕೊಲೆಯ ಹಿಂದೆ ಇದ್ದಿದ್ದು ದಿಲಶಾದ್ ಹವಾಲ್ದಾರ್​ಳ ಪತಿ ಎಂದು ಸಾಬೀತಾಗಿತ್ತು. ಅವನು ದೂರದ ಊರಿನಲ್ಲಿ ಇದ್ದಾಗ, ಇತ್ತ ದಿಲಶಾದ್​ ಪಕ್ಕದ ಮನೆಯವನೊಂದಿಗೆ ಸಂಬಂಧ ಬೆಳೆಸಿದ್ದಳು. ಇದು ಆಕೆಯ ಪತಿಗೆ ಗೊತ್ತಾಗಿ ಪ್ರಶ್ನೆ ಮಾಡಿದ್ದ. ಗಲಾಟೆ ನಡೆದಿತ್ತು. ಇನ್ನೂ ಕೆಲವರೊಟ್ಟಿಗೆ ಸೇರಿ ಪತ್ನಿಯ ಮೇಲೆ ದಾಳಿ ನಡೆಸಿದ್ದ. ಬಿಡಿಸಲು ಹೋದ ಮಗನಿಗೂ ಚಾಕುವಿನಿಂದ ಇರಿದಿದ್ದ. ಇದೀಗ ಈ ಮಹಿಳೆಯ ಕೊಲೆ ಯಾಕಾಯಿತು ಎಂದು ತನಿಖೆ ಬಳಿಕವಷ್ಟೇ ತಿಳಿಯಲಿದೆ.

ಇದನ್ನೂ ಓದಿ: ಕಾಣೆಯಾಗಿದ್ದ ಮಹಿಳೆ ಶವ ನೀರಿನ ಟ್ಯಾಂಕ್​​ನಲ್ಲಿ ಪತ್ತೆ; ಯಾರನ್ನು ಹುಡುಕಿ ಹೋಗಿದ್ದಳೋ ಅವನಿಂದಲೇ ಹತ್ಯೆ

Exit mobile version