Site icon Vistara News

Assault Case : ರಹಸ್ಯ ಹೊರಗೆ ಹೇಳ್ತೀಯಾ ಎಂದು ಅಟೆಂಡರ್‌ಗೆ ಥಳಿಸಿದ ಗ್ರಾ.ಪಂ ಸದಸ್ಯ!

Assault case Chelur grama panchayat member beaten up by attendant

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ‌ (Chikkabalapur News) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಗ್ರಾಮ ಪಂಚಾಯಿ (Chelur Grama Panchayat) ಸದಸ್ಯನೊಬ್ಬ ಅಟೆಂಡರ್‌ ಹಿಡಿದು ಹಲ್ಲೆ ಮಾಡಿದ್ದಾನೆ. ಗ್ರಾ.ಪಂ ಸದಸ್ಯ ಕಡ್ಡೀಲು ವೆಂಕಟರವಣಪ್ಪ ಎಂಬುವವರು ಅಟೆಂಡರ್ ಮುರಳಿ ಮೇಲೆ ಹಲ್ಲೆ (Assault Case) ನಡೆಸಿದ್ದಾರೆ.

ಹಲ್ಲೆ ಮಾಡುವ ದೃಶ್ಯ ಗ್ರಾಮ ಪಂಚಾಯಿತಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗ್ರಾಮ ಪಂಚಾಯಿತಿ ರಹಸ್ಯಗಳನ್ನು ಹೊರಗೆ ಹೇಳ್ತೀಯಾ ಎಂದು ಕಡ್ಡೀಲು ವೆಂಕಟರವಣಪ್ಪ ಮುರಳಿಗೆ ಹೊಡೆದಿದ್ದಾರೆ. ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮುರಳಿ ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಕಡ್ಡೀಲು ವೆಂಕಟರವಣಪ್ಪ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Namma Metro : ಖಾಸಗಿ ವಾಹನ ಬಳಸುವ ಶೇ. 95 ಬೆಂಗಳೂರಿಗರು ಮೆಟ್ರೋಗೆ ಶಿಫ್ಟ್‌ ಆಗಲು ರೆಡಿ!

ಬೂಸಾ ಕೊಡಲು ತಡ ಮಾಡಿದ್ದಕ್ಕೆ ಬಿತ್ತು ಗೂಸಾ!

ತುಮಕೂರು: ಬೂಸಾ ಕೊಡಲು ತಡಮಾಡಿದ್ದಕ್ಕೆ ಮೂವರು ಶೆಟ್ಟಿಕೆರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವಕುಮಾರ್‌ ಮೇಲೆ ಹಲ್ಲೆ (Assault Case) ನಡೆಸಿದ್ದಾರೆ. ತುಮಕೂರು (Tumkur News ) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯಲ್ಲಿ ಈ ಘಟನೆ ನಡೆದಿದೆ. ಇದೀಗ ಗೂಸಾ ಕೊಟ್ಟವರ ಮೇಲೆ ಎಫ್ಐಆರ್ ದಾಖಲಾಗಿದೆ.

ಕ್ಷುಲ್ಲಕ ವಿಚಾರಕ್ಕೆ ಕರ್ತವ್ಯನಿರತ ಶಿವಕುಮಾರ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕೇಳಿದಾಕ್ಷಣ ಬೂಸಾ ಕೊಡಲಿಲ್ಲ ಎಂದು‌ ಸಿಟ್ಟಿಗೆದ್ದ ನಾಗರಾಜು, ಯೋಗಾನಂದ್,‌‌ ಅನಿಲ್ ಎಂಬುವವರು ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

ಬೂಸಾ ಗೋದಾಮಿಗೆ ನುಗ್ಗಿ ದಾಂಧಲೆ ನಡೆಸಿದ ಈ ಮೂವರ ವಿರುದ್ಧ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Fraud Case : ಆಟೋ ಚಾಲಕನ ಕರಾಮತ್ತು; ದುಡ್ಡಿನ ಮೋಸದಾಟ ಬ್ಲಾಗರ್‌ನಿಂದ ಹೊರಬಿತ್ತು!

ಹಲ್ಲೆಗೊಳಗಾದ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ

ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಗೆ ಥಳಿಸಿದ ಯುವಕರ ಗುಂಪು

ತುಮಕೂರಿನ ಪಾವಗಡದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಯುವಕರ ಗುಂಪುವೊಂದು ಮನಬಂದಂತೆ ಹಲ್ಲೆ ನಡೆಸಿದೆ. ಕ್ಯಾಂಟಿನ್‌ ಮುಂಭಾಗದಲ್ಲಿ ಯುವಕರು ವಾಹನ ನಿಲುಗಡೆ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಂಟೀನ್‌ ಸಿಬ್ಬಂದಿಯನ್ನು ಹಿಡಿದು ಥಳಿಸಿದ್ದಾರೆ.

ಘಟನೆಯಲ್ಲಿ ನಾಗರಾಜ್ ಮತ್ತು ಮಂಜು ಎಂಬುವರಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಸ್ಥಳೀಯರು ಗಾಯಾಳನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಲ್ಲೆ ಮಾಡಿದ ಯುವಕರ ವಿರುದ್ಧ ಪಾವಗಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version