Site icon Vistara News

Assault Case In Kolar: ತಂಗಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಅಣ್ಣನ ಮೇಲೆ ಲಾಂಗ್‌ನಿಂದ ಹಲ್ಲೆ; ಕೈಕಟ್ಟಿ ಕುಳಿತ ಖಾಕಿ ಪಡೆ!

Assaulted for questioning ragging of sister

#image_title

ಕೋಲಾರ: ಇಲ್ಲಿನ ಲಕ್ಷ್ಮೀಪುರ ಗ್ರಾಮದಲ್ಲಿ ಪುಂಡರ ಗ್ಯಾಂಗ್‌ವೊಂದು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ (Assault Case In Kolar) ಮಾಡಿದೆ. ತಂಗಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಲಾಂಗ್‌ಗಳಿಂದ ಹಲ್ಲೆ ಮಾಡಲಾಗಿದೆ.…

ತಾಡಿಗೋಳ್ ಕ್ರಾಸ್‌ನ ಗಂಗಾಧರ್, ನಿತಿನ್, ವೆಂಕಟೇಶ್ ಸೇರಿದಂತೆ ಎಂಟು ಜನರ ತಂಡವು ಲಕ್ಷ್ಮೀಪುರ ಗ್ರಾಮದ ವೆಂಕಟೇಶ್ ಎಂಬುವವರಿಗೆ ಹಲ್ಲೆ ನಡೆಸಿದ್ದಾರೆ. ಪ್ರತಿನಿತ್ಯ ಲಕ್ಷ್ಮೀಪುರದಿಂದ ತಾಡಿಗೋಳ್ ಮಾರ್ಗವಾಗಿ ಶ್ರೀನಿವಾಸಪುರಕ್ಕೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಪ್ರತಿನಿತ್ಯ ಈ ಪುಂಡರು ಚುಡಾಯಿಸುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ವಿದ್ಯಾರ್ಥಿನಿಗೆ ಪ್ರೀತಿ ಮಾಡು ಇಲ್ಲದಿದ್ದರೆ ಆ್ಯಸಿಡ್‌ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ವಿದ್ಯಾರ್ಥಿನಿ ಪೋಷಕರ ಬಳಿ ಎಲ್ಲವನ್ನು ಹೇಳಿಕೊಂಡಿದ್ದಾಳೆ. ಇನ್ನು ಈ ಬಗ್ಗೆ ಪ್ರಶ್ನೆ ಮಾಡಲು ಹೋದ ವಿದ್ಯಾರ್ಥಿನಿಯ ಅಣ್ಣ ವೆಂಕಟೇಶ್‌ಗೆ ಲಾಂಗ್‌ಗಳಿಂದ ಮಾರಣಾಂತಿಕ‌ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ವೆಂಕಟೇಶ್‌ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ನಡೆದು ಒಂದು ದಿನ ಕಳೆದರೂ ಶ್ರೀನಿವಾಸಪುರ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಗಂಗಾಧರ್ ಪ್ರಭಾವಿ ವ್ಯಕ್ತಿಯಾಗಿದ್ದು ಒಂದಷ್ಟು ಪುಂಡಾರಿಗಳನ್ನು ಗುಂಪು ಕಟ್ಟಿಕೊಂಡಿದ್ದಾನೆ. ಪ್ರತಿನಿತ್ಯ ದಾರಿಯಲ್ಲಿ ಹೋಗುವ ಹುಡುಗಿಯರ ಅನ್ನು ಚುಡಾಯಿಸುವುದೇ ಕಾರ್ಯಗತ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ‘ಅಲ್ಲಾ’ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ ಎಂದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ಗಂಗಾಧರ್ ತನ್ನ ಪ್ರಭಾವ ಬಳಸಿ ರಾಜಾರೋಷವಾಗಿ ಓಡಾಡುತ್ತಿದ್ದರೂ, ರಾಜಕೀಯ ಪ್ರಭಾವಕ್ಕೊಳಗಾಗಿ ಗಂಭೀರ ಘಟನೆ ನಡೆದರೂ ಪೊಲೀಸರು ಕೈ ಕಟ್ಟಿ ಹಾಕಿಕೊಂಡಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ವಿದೇಶಿ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version