Site icon Vistara News

Assault Case : ಬಸ್‌ನಲ್ಲಿ ಮುಂದುವರಿದ ಹೊಡಿಬಡಿ; ಕಂಡಕ್ಟರ್‌ಗೆ ಥಳಿಸಿದ ಪ್ರಯಾಣಿಕ

KSRTC conductor assaulted by passenger

ಕೋಲಾರ: ಬಸ್‌ ಕಂಡಕ್ಟರ್‌ ಹಾಗೂ ಪ್ರಯಾಣಿಕರ ನಡುವೆ ಹೊಡಿಬಡಿ ಮುಂದುವರಿದಿದೆ. ಕ್ಷುಲ್ಲಕ ವಿಚಾರಕ್ಕೆ ತಾಳ್ಮೆ ಕಳೆದುಕೊಂಡು ಸಾರ್ವಜನಿಕ ಸ್ಥಳದಲ್ಲೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಸದ್ಯ ಪ್ರಯಾಣಿಕನೊಬ್ಬ (assaulted by passenger) ಕೆಎಸ್‌ಆರ್‌ಟಿಸಿ ಬಸ್‌ನ ಕಂಡಕ್ಟರ್‌ಗೆ (KSRTC conductor) ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಮುಜಾಸಿರ್ ಪಾಷಾ ಎಂಬಾತ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ತಿಮ್ಮರಾಜು ಎಂಬುವವರು ಹಲ್ಲೆ ಮಾಡಿದ್ದಾನೆ. ಕೋಲಾರ ಬಸ್‌ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ. ಕೋಲಾರದಿಂದ ಬೆಂಗಳೂರು ಕಡೆಗೆ ಹೋಗುವ ಬಸ್‌ಗಾಗಿ ನೂರಾರು ಪ್ರಯಾಣಿಕರು ಕಾದುಕುಳಿತಿದ್ದರು.ಬಸ್‌ ಬಂದೊಡನೇ ನಾ ಮುಂದು ತಾ ಮುಂದು ಎಂದು ಪ್ರಯಾಣಿಕರು ಬಸ್‌ ಏರಿದ್ದರು.

ಈ ಮಧ್ಯೆ ಚಾಲಕ ಬಸ್‌ ರಿವರ್ಸ್‌ ತೆಗೆಯಲು ಮುಂದಾಗಿದ್ದರು, ಹೀಗಾಗಿ ಕಂಡಕ್ಟರ್‌ ತಿಮ್ಮರಾಜು ಮುಂಜಾಗ್ರತಾ ಕ್ರಮವಾಗಿ ಡೋರ್‌ ಲಾಕ್‌ ಮಾಡಿದ್ದರು. ರಿವರ್ಸ್‌ ತೆಗೆಯುವಾಗಲೇ ಓಡಿ ಬಂದ ಮುಜಾಸಿರ್‌ ಪಾಷಾ ಬಸ್‌ ನಿಲ್ಲಿಸುವಂತೆ ಕೂಗಿದ್ದಾನೆ. ಬಸ್‌ನಲ್ಲಿ ರಶ್‌ ಇದ್ದ ಕಾರಣಕ್ಕೆ ನಿಲ್ಲಿಸುವವರೆಗೂ ಇರು ಎಂದು ಕಂಡಕ್ಟರ್‌ ತಿಮ್ಮರಾಜು ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಿಗೆದ್ದ ಮುಜಾಸಿರ್‌ ಪಾಷಾ ಕಂಡಕ್ಟರ್ ತಿಮ್ಮರಾಜು ಮೇಲೆ ಎಗರಿ ಹಲ್ಲೆ ಮಾಡಿದ್ದಾನೆ.

ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ತಿಮ್ಮರಾಜು ಅವರ ಸಮವಸ್ತ್ರನ್ನು ಹರಿದು ಹಾಕಿ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಇತರೆ ಸಿಬ್ಬಂದಿ ಹಾಗೂ ಸ್ಥಳೀಯರು ಸಹಾಯಕ್ಕೆ ಬಂದು ಗಲಾಟೆಯನ್ನು ಬಿಡಿಸಿದ್ದಾರೆ. ಗಾಯಗೊಂಡಿದ್ದ ತಿಮ್ಮರಾಜು ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಸದ್ಯ ಮುಜಾಸಿರ್ ಪಾಷಾ ವಿರುದ್ಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Peenya Flyover : ಲೋಡ್‌ ಟೆಸ್ಟಿಂಗ್‌ ಕಂಪ್ಲೀಟ್‌; ಪೀಣ್ಯ ಫ್ಲೈಓವರ್‌ ಸಂಚಾರಕ್ಕೆ ಮುಕ್ತ

ಕಂಡಕ್ಟರ್‌ ಜತೆ ಕಿರಿಕ್‌; ನಡು ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾದ ಮಂಗಳಮುಖಿ

ಚಿಕ್ಕಬಳ್ಳಾಪುರ: ಬಸ್‌ ಕಂಡಕ್ಟರ್‌ ಜತೆ ಕಿರಿಕ್‌ ಮಾಡಿಕೊಂಡ ಮಂಗಳಮುಖಿಯೊಬ್ಬಳು (Transgender issue) ನಡುರಸ್ತೆಯಲ್ಲಿ ಬಟ್ಟೆ ಬಿಚ್ಚಿ ತನ್ನ ಆಕ್ರೋಶವನ್ನು (Transgender becomes Naked) ತೋರ್ಪಡಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ (Chikkaballapura News) ಶಿಡ್ಲಘಟ್ಟ ವೃತ್ತದಲ್ಲಿ ನಡೆದಿತ್ತು. ತಮಿಳುನಾಡು ಮೂಲದ ಸ್ಮಿತಾ ಎಂಬ ಮಂಗಳಮುಖಿಯೇ ಹೀಗೆ ವರ್ತಿಸಿದವಳು.

ಸ್ಮಿತಾ ಚೆನ್ನೈ ಮೂಲದವಳು. ಚಿಕ್ಕಬಳ್ಳಾಪುರದಲ್ಲಿರುವ ಈಶ ಫೌಂಡೇಷನ್‌ಗೆ ಸೇರಿದ ಶಿವನ ಮೂರ್ತಿಯ ದರ್ಶನ ಮತ್ತಿತರ ಚಟುವಟಿಕೆಗಳಿಗಾಗಿ ಆಕೆ ಇಲ್ಲಿಗೆ ಬಂದಿದ್ದಳು. ಅಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮವೂ ಇತ್ತು. ಮಂಗಳವಾರ ಸ್ಮಿತಾ ಬಸ್‌ ಹತ್ತಿದ್ದಳು. ಬಸ್‌ ಹತ್ತಿದ ಆಕೆಗೂ ಆ ಬಸ್ಸಿನ ಕಂಡಕ್ಟರ್‌ಗೂ ಜಗಳ ಶುರುವಾಗಿದೆ. ಲಗೇಜ್‌ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳ ಶುರುವಾಗಿದ್ದು ರಣರಂಪವಾಗಿದೆ. ಈ ಗಲಾಟೆಯ ಮಧ್ಯೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ ಆಕೆ ಕಂಡಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ತಡೆಯಲು ಬಂದ ಇತರ ಪ್ರಯಾಣಿಕರ ಜತೆಗೆ ಅಸಭ್ಯವಾಗಿ ವರ್ತಿಸಿದ ಆಕೆಯ ಉಪಟಳ ಸಹಿಸಲಾಗದೆ ಆಕೆಯನ್ನು ಪ್ರಯಾಣಿರಕರೆಲ್ಲ ಸೇರಿ ಶಿಡ್ಲಘಟ್ಟ ವೃತ್ತದಲ್ಲಿ ಇಳಿಸಿದರು. ಇದರಿಂದ ಕನಲಿ ಕೆಂಡವಾದ ಸ್ಮಿತಾ ಕೂಡಲೇ ತಾನು ಉಟ್ಟಿದ್ದ ಚೂಡಿದಾರ್‌ನ ಟಾಪನ್ನು ಬಿಚ್ಚಿದ ಆಕೆ ನಗ್ನ ದೇಹ ಪ್ರದರ್ಶನ ಮಾಡುತ್ತಾ ಕಂಡಕ್ಟರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಆಕೆ ಹಾಗೆ ಬಟ್ಟೆ ಬಿಚ್ಚುತ್ತಿದ್ದಂತೆಯೇ ನೂರಾರು ಜನರು ಅಲ್ಲಿ ಸೇರಿದರು. ಎಲ್ಲರೂ ಕುತೂಹಲದಿಂದ ಗಲಾಟೆಯನ್ನು ಗಮನಿಸುತ್ತಿದ್ದಾಗ ಪೊಲೀಸರು ಧಾವಿಸಿ ಆಕೆಗೆ ಬಟ್ಟೆ ಧರಿಸುವಂತೆ ಒತ್ತಾಯಿಸಿದರು. ಆಕೆ ಕೊನೆಗೆ ಶಾಲನ್ನು ಹೊದ್ದುಕೊಂಡಳು. ಆದರೂ ಆಗಾಗ ಕಂಡಕ್ಟರ್‌ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಶಾಲು ತೆರೆಯವುದನ್ನು ಮುಂದುವರಿಸಿದ್ದಳು. ಕೊನೆಗೆ ಆಕೆಯನ್ನು ಪೊಲೀಸರು ಕರೆದುಕೊಂಡು ಹೋದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version