Site icon Vistara News

Assault Case : ಇಬ್ಬರನ್ನು ಅಪಹರಿಸಿ ಮನಬಂದಂತೆ ಥಳಿಸಿದ ಅಕ್ರಮ ಮರಳು ದಂಧೆಕೋರರು!

Rowdy sheeter Vijay rathod assaulted

ಯಾದಗಿರಿ: ಅಕ್ರಮ ಮರಳು ದಂಧೆಕೋರರು ವ್ಯಕ್ತಿಗಳಿಬ್ಬರನ್ನು ಕಿಡ್ನ್ಯಾಪ್‌ ಮಾಡಿ ಮಾರಣಾಂತಿಕವಾಗಿ ಹಲ್ಲೆ (Assault Case) ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ರಾಜು ನಡಿಹಾಳ್, ಶರಣಗೌಡ ಹಯ್ಯಾಳ ಎಂಬುವವರನ್ನು ರೌಡಿಶೀಟರ್ ವಿಜಯ ರಾಠೋಡ್ ಗ್ಯಾಂಗ್‌ ಹಲ್ಲೆ ನಡೆಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಳ್ಳಿ ಬಳಿ ಕಿಡ್ನ್ಯಾಪ್ ಮಾಡಿ ಕಾರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ರೌಡಿಶೀಟರ್‌ ವಿಜಯ ರಾಠೋಡ್‌ ಶಹಾಪುರ ತಾಲೂಕಿನ ಚಾಮನಾಳ ಗ್ರಾಮ ಪಂಚಾಯಿತಿಯ ಸದಸ್ಯನೂ ಆಗಿದ್ದಾನೆ. ರಾಜು ಹಾಗೂ ಶರಣಗೌಡರನ್ನು ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿದ್ದಾರೆ.

ಕಾರಿನ ಡಿಕ್ಕಿಯೊಳಗೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಿಡ್ನ್ಯಾಪ್‌ ಮಾಡಿ ಬಳಿಕ ಜೀವಂತವಾಗಿ ಕೃಷ್ಣಾ ನದಿಗೆ ಎಸೆಯಲು ಪ್ಲ್ಯಾನ್‌ ಮಾಡಿದ್ದರು ಎನ್ನಲಾಗಿದೆ. ಆದರೆ ಹಲ್ಲೆ ಮಾಡುವಾಗ ಸ್ಥಳೀಯರು ಗಮನಿಸಿದ ಕಾರಣಕ್ಕೆ ಇಬ್ಬರನ್ನೂ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Murder Case : ಕುಡಿದು ಟೈಟಾಗಿದ್ದ ರೌಡಿಶೀಟರ್‌ಗೆ ಮಚ್ಚು ಬೀಸಿದ ಎದುರಾಳಿಗಳು

ಮಾರಣಾಂತಿಕ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ರಾಜು, ಶರಣಗೌಡರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 18ರಂದು ಈ ಘಟನೆ ನಡೆದಿದ್ದು, ತಡವಾಗಿ ದೂರು ದಾಖಲಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ವಿಜಯರಾಠೋಡ್ ಸೇರಿ ಹಲವರ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.

ಪ್ರತಿಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ

ನನ್ನ ಮಗನ ಮೇಲೆ ಹಲ್ಲೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹಲ್ಲೆಗೊಳಗಾದ ಶರಣಗೌಡ ತಂದೆ ವೀರಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಾರೋ ನನ್ನ ಮಗನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಜ್ಞೆಕಳೆದುಕೊಂಡಿದ್ದಾನೆ. ನಮ್ಮ ಮಗನಿಗೆ ಪ್ರಜ್ಞೆ ಬಂದ ನಂತರ ಘಟನೆ ಸಂಬಂಧ ಎಲ್ಲವೂ ತಿಳಿಯಲಿದೆ. ನಮ್ಮ‌ ಮಗನನ್ನು ಈ ಸ್ಥಿತಿಗೆ ತಂದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version