Site icon Vistara News

Assault Case : ಡೆತ್‌ ಸರ್ಟಿಫಿಕೇಟ್‌ ಕೊಡದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಜಾಡಿಸಿದ

Assault case in nelamangala

ನೆಲಮಂಗಲ: ಇಲ್ಲಿನ ಘಂಟೆಹೊಸಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗ್ರಾಮ ಲೆಕ್ಕಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೃಷ್ಣಪ್ಪ ಎಂಬಾತ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್‌ಗೆ ಮನಬಂದಂತೆ (Assault Case) ಥಳಿಸಿದ್ದಾನೆ.

ಕೃಷ್ಣಪ್ಪ ಸಂಬಂಧಿಕರೊಬ್ಬರ ಮರಣ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಸ್ಥಳ ಪರಿಶೀಲನೆಗಾಗಿ ಲೆಕ್ಕಾಧಿಕಾರಿ ಗೋಪಾಲ್‌, ಘಂಟೆಹೊಸಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಗೋಪಾಲ್‌ ಬೆಂಗಳೂರಿನಲ್ಲಿ ಮೃತಪಟ್ಟವರಿಗೆ ನೆಲಮಂಗಲದಲ್ಲಿ ಮರಣ ಪ್ರಮಾಣ ಪತ್ರ ಕೊಡಲು ಬರುವುದಿಲ್ಲ ಎಂದಿದ್ದಾರೆ.

ಗಾಯಾಳು ಆರೋಗ್ಯ ವಿಚಾರಿಸಿದ ತಹಸೀಲ್ದಾರ್‌ ಅರುಂಧತಿ

ಇದರಿಂದ ಸಿಟ್ಟಿಗೆದ್ದ ಘಂಟೆಹೊಸಹಳ್ಳಿ ನಿವಾಸಿ ಕೃಷ್ಣಪ್ಪ ಏಕಾಏಕಿ ಗೋಪಾಲ್‌ ಮೇಲೆ ಎರಗಿ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಗಾಯಾಳು ಗೋಪಾಲ್‌, ದಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ನೆಲಮಂಗಲ ತಹಸೀಲ್ದಾರ್ ಅರುಂಧತಿ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version