Site icon Vistara News

ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಅತಿರುದ್ರ ಮಹಾಯಾಗ; ವಿಸ್ತಾರ ನ್ಯೂಸ್‌ ಸಿಇಒ ಹರಿಪ್ರಕಾಶ್ ಕೋಣೆಮನೆ ಭೇಟಿ

Ati Rudra Yaga at Shivapadi Sri Umamaheswara Temple in Manipal Hariprakash konemane visits

ಉಡುಪಿ: ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗಕ್ಕೆ ವಿಸ್ತಾರ ನ್ಯೂಸ್‌ ಸಂಪಾದಕ, ಸಿಇಒ ಹರಿಪ್ರಕಾಶ್ ಕೋಣೆಮನೆ ಭೇಟಿ ನೀಡಿದರು.

ಉಡುಪಿಗೆ ಭೇಟಿ ನೀಡಿದ ಅವರು ಮಣಿಪಾಲದ ಸರಳೆಬೆಟ್ಟು ಶಿವಪಾಡಿಗೆ ಭೇಟಿ ನೀಡಿದರು. ಈ ವೇಳೆ ಉಡುಪಿ ಶಾಸಕ ರಘುಪತಿ ಭಟ್‌ ಸ್ವಾಗತಿಸಿದರು. ಈ ಸಂದರ್ಭ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಠಾಕೂರ್‌, ಅತಿರುದ್ರ ಯಾಗ ಮತ್ತು ವ್ಯವಸ್ಥೆಗಳ ಕುರಿತು ಹರಿಪ್ರಕಾಶ್ ಕೋಣೆ‌ಮನೆ ಅವರಿಗೆ ಮಾಹಿತಿ ನೀಡಿದರು.

ದೇವಳಕ್ಕೆ ಭೇಟಿ ನೀಡಿದ ಹರಿಪ್ರಕಾಶ್ ಕೋಣೆಮನೆಯವರು ಶ್ರೀದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ದೇವಳ ವತಿಯಿಂದ ವಿಸ್ತಾರ ನ್ಯೂಸ್‌ನ ಸಿಇಒ ಹರಿಪ್ರಕಾಶ್ ಕೋಣೆಮನೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ: Karnataka Election : ರಾಹುಲ್‌ ಮದುವೆ ಆಗದಿರುವುದಕ್ಕೆ ಏನು ಕಾರಣ? ವಿದಾದಾತ್ಮಕ ಹೇಳಿಕೆ ನೀಡಿದ ನಳಿನ್‌ ಕುಮಾರ್‌ ಕಟೀಲ್‌

ಈ ಸಂದರ್ಭ ಸಂಸ್ಥೆಯ ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್‌) ವಿನಯ್ ಶೇಷಗಿರಿ, ಆಪ್ತರಾದ ಗುರುರಾಜ್ ಗಂಟಿಹೊಳೆ, ಉದ್ಯಮಿ ಮನೋಹರ್ ಶೆಟ್ಟಿ, ಕೃಷ್ಣ‌ಪ್ರಸಾದ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version