Site icon Vistara News

Attempt Murder Case: ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಮಾರಾಮಾರಿ; ನಡು ರಸ್ತೆಯಲ್ಲಿ ಯುವಕನಿಗೆ ಚಾಕು ಇರಿತ

#image_title

ಧಾರವಾಡ: ಇಲ್ಲಿನ ಧಾರವಾಡ ಸುಭಾಷ್ ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಮಾರಾಮಾರಿ ನಡೆದಿದೆ. ಮದ್ಯಪಾನ ಮಾಡಿದ್ದ ಯುವಕರ ಗುಂಪೊಂದು ನಡುರಸ್ತೆಯಲ್ಲಿ ಯುವಕನಿಗೆ ಥಳಿಸಿ ಬಳಿಕ ಚಾಕುವಿನಿಂದ (Attempt Murder Case) ಇರಿದಿದ್ದಾರೆ.

ಗಲಾಟೆ ದೃಶ್ಯಾವಳಿಯನ್ನು ಸ್ಥಳದಲ್ಲಿದ್ದ ಯುವಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಯುವಕನ ತಲೆಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ಮಾರಾಮಾರಿ ನಡೆಸಿದವರು ಧಾರವಾಡದ ಯುವಕರೆಂದು ಮಾಹಿತಿ ಲಭ್ಯವಾಗಿದೆ. ಹಲ್ಲೆಗೊಳಗಾದ ಯುವಕನಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿದೆ. ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವಕರ ಗುಂಪು ಪರಾರಿ ಆಗಿದೆ.

ಇದನ್ನೂ ಓದಿ: Giant Wheel Accident: ಜೈಂಟ್ ವ್ಹೀಲ್‌ಗೆ ಸಿಕ್ಕಿ ಪೂರಾ ಕಿತ್ತು ಬಂದ ಬಾಲಕಿ ತಲೆಕೂದಲು: ಶ್ರೀರಂಗಪಟ್ಟಣದಲ್ಲಿ ಅವಘಡ

Exit mobile version