Site icon Vistara News

Attempt to murder : ಮೊಬೈಲ್ ಫ್ಲಾಶ್‌ ಮಾಡಲ್ಲ ಎಂದವನಿಗೆ ಲಾಂಗ್‌ನಿಂದ ಹೊಡೆದು ಅಟ್ಟಾಡಿಸಿದ ಕಳ್ಳಿ!

Sadiya And imraan

ಬೆಂಗಳೂರು: ಆಕೆ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದಳು. ಕ್ಷಣಾರ್ಧದಲ್ಲೇ ಮೊಬೈಲ್‌ ಕದ್ದು ಮಾಯವಾಗುತ್ತಿದ್ದಳು. ಹೀಗೆ ಕದ್ದ ಮೊಬೈಲ್‌ ಅನ್ನು ಪರಿಚಯಸ್ಥ ಯುವಕನ ಬಳಿ ಫ್ಲಾಶ್‌ ಮಾಡಿಸಿದ್ದಳು. ಆದರೆ ಈ ಬಾರಿ ಕದ್ದು ತಂದಿದ್ದ ಮೊಬೈಲ್‌ ಅನ್ನು ಆ ಯುವಕ ಫ್ಲಾಶ್‌ ಮಾಡಿ ಕೊಡಲ್ಲ‌ ಎಂದಿದ್ದ. ಇದಕ್ಕೆ ಸಿಟ್ಟಾದ ಕಳ್ಳಿ ಅಟ್ಟಾಡಿಸಿ ಕೊಲ್ಲಲು (Attempt to murder) ಮುಂದಾಗಿದ್ದಾಳೆ.

ಸಾದೀಯಾ ಎಂಬಾಕೆಯ ತನ್ನ ನಟೋರಿಯಸ್ ಗ್ಯಾಂಗ್‌ನೊಂದಿಗೆ ಇಮ್ರಾನ್ ಉಲ್ಲಾ ಖಾನ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಇಮ್ರಾನ್‌ ಕುತ್ತಿಗೆಗೆ ಹಾಗೂ ಕಾಲಿನ ನರ ಭಾಗಕ್ಕೆ ಲಾಂಗ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾಳೆ.

ಈ ಇಮ್ರಾನ್ ಮೊಬೈಲ್ ಫ್ಲಾಶ್‌ ಮಾಡಿ ರೀಸೆಟ್ ಮಾಡುವುದನ್ನು ತಿಳಿದಿದ್ದ. ಹೀಗಿದ್ದಾಗ ಶಾಹಿದ್ ಅಲಿಯಾಸ್‌ ಕಾಲು ಎಂಬಾತನಿಂದ ಈ ಸಾದೀಯಾ ಪರಿಚಯವಾಗಿದ್ದಳು. ಒಮ್ಮೆ ಸಾದೀಯಾ, ಇಮ್ರಾನ್‌ ಬಳಿ ಪಿನ್ ಅನ್ ಲಾಕ್ ಮಾಡಿ ರಿಸೆಟ್ ಮಾಡಿಸಿಕೊಂಡಿದ್ದಳು. ನಂತರ ಪ್ರತಿ ದಿನ ಮೊಬೈಲ್ ಕದ್ದು ಫ್ಲಾಶ್‌ ಮಾಡಿಸಿಕೊಳ್ಳುತ್ತಿದ್ದಳು. ಆಕೆಯ ಕಳ್ಳತನದ ಕಸುಬು ಗೊತ್ತಿರದ ಇಮ್ರಾನ್‌ ಸಹಾಯ ಮಾಡುತ್ತಿದ್ದ.

ಇದನ್ನೂ ಓದಿ: Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

ಈ ನಡುವೆ ಈಕೆಯ ಮೇಲೆ ಅನುಮಾನಗೊಂಡ ಇಮ್ರಾನ್ ಮೊಬೈಲ್ ಫ್ಲಾಶ್‌ ಮಾಡಿ ಕೊಡುವುದು ನಿಲ್ಲಿಸಿ ಬಿಟ್ಟಿದ್ದ. ಆದರೂ ಬಿಡದೆ ಇಮ್ರಾನ್‌ಗೆ ವಾಟ್ಸ್‌ಆ್ಯಪ್ ಮೂಲಕ ನಿರಂತರವಾಗಿ ಕರೆ ಮಾಡುತ್ತಿದ್ದಳು. ಈಕೆಯ ಕಾಟಕ್ಕೆ ಬೇಸತ್ತು ಇಮ್ರಾನ್‌‌ ಕರೆ ಸ್ವೀಕರಿಸಿ ಹೆಗಡೆ ನಗರದ ಟೀ ಶಾಪ್‌ಗೆ ಕರೆಸಿಕೊಂಡಿದ್ದ.

ಹಲ್ಲೆಗೆ ಯತ್ನಿಸಿದವರು

ನಂತರ ಅಲ್ಲಿಗೆ ಬಂದಿದ್ದ ಸಾದೀಯಾ ಗ್ಯಾಂಗ್ ಯಾರಿಲ್ಲಿ ಇಮ್ರಾನ್ ಎಂದು ಹೇಳಿ ಮೇಡಂ ಬರುವುದಕ್ಕೆ ಹೇಳಿದ್ದಾರೆ, ಕಾರು ಹತ್ತುವಂತೆ ಹೇಳಿದ್ದಾರೆ. ಇಮ್ರಾನ್‌ ನಿರಾಕರಿಸಿದ್ದಕ್ಕೆ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮಣಿಕಟ್ಟಿನ ನರ ಕಟ್ ಆಗಿದ್ದು ಕಾಲಿನ ಭಾಗ ಕೂಡ ಸೀಳಿ ಹೋಗಿದೆ. ಆದರೂ ಬಿಡದೆ ಇಮ್ರಾನ್‌ನನ್ನು ಅಟ್ಟಿಸಿಕೊಂಡು ಹೋಗಿ ಕೊಲೆಗೆ ಯತ್ನಿಸಿದ್ದಾರೆ.

ಇತ್ತ ಜನ ಸೇರುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಗಂಭೀರ ಗಾಯಗೊಂಡಿರುವ ಇಮ್ರಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version