Site icon Vistara News

Attempt To Murder | ಶಿವಮೊಗ್ಗದಲ್ಲಿ ಮತ್ತೆ ಚೂರಿ ಇರಿತ; ಗಾಯಾಳು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು

Crime News

ಶಿವಮೊಗ್ಗ: ಶಿವಮೊಗ್ಗದಲ್ಲಿ ಪದೇ ಪದೆ ಚೂರಿ ಇರಿತ ಪ್ರಕರಣಗಳು ಕಂಡುಬರುತ್ತಿವೆ. ನಗರದ ಬಿ.ಎಚ್.ರಸ್ತೆಯ ಆರ್ಕಿಡ್ ಹೋಟೆಲ್ ಬಳಿ ದುಷ್ಕರ್ಮಿಗಳು ಹಲ್ಲೆ ಮಾಡಿ ಯುವಕನೊಬ್ಬನಿಗೆ ಚಾಕು ಇರಿದಿದ್ದ ಘಟನೆ ಮಾಸುವ ಮುನ್ನವೇ ಇದೀಗ ಗಾಂಧಿ ಬಜಾರ್‌ನಲ್ಲಿರುವ ಬಟ್ಟೆ ವ್ಯಾಪಾರಿಯೊಬ್ಬನಿಗೆ ಚಾಕು ಇರಿದಿರುವುದು (Attempt To Murder) ನಡೆದಿದೆ.

ಫಯಾಜ್ ಎಂಬ ಬಟ್ಟೆ ವ್ಯಾಪಾರಿ ಚೂರಿ ಇರಿತಕ್ಕೆ ಒಳಗಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಮೂಲಿ ವಸೂಲಿಗೆ ಬಂದವರಿಬ್ಬರು ಚೂರಿ ಹಾಕಿದ್ದಾರೆ ಎಂದು ಹೇಳಲಾಗಿದೆ. ಅರ್ಬಾಜ್, ಸುಹೇಲ್ ಎಂಬುವವರು ಚಾಕು ಇರಿದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಅರ್ಬಾಜ್, ಸುಹೇಲ್ ಎಂಬುವವರು ಮಾಮೂಲಿ ವಸೂಲಿ ಮಾಡಲು ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಆರೋಪಿಗಳು ಹಾಗೂ ಫಯಾಜ್‌ ನಡುವೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೆ, ಮಾಮೂಲಿ ನೀಡಲು ಫಯಾಸ್‌ ನಿರಾಕರಿಸಿದ್ದರಿಂದ ಇವರಿಬ್ಬರು ಚೂರಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಚೂರಿ ಇರಿದ ಕೂಡಲೇ ಇಬ್ಬರೂ ಸ್ಥಳದಿಂದ ಪರಾರಿ ಆಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ | Karnataka Bank Locker | ಬ್ಯಾಂಕ್ ಲಾಕರ್‌ ಎಷ್ಟು ಸೇಫ್‌? ಭದ್ರಕೋಟೆಯಲ್ಲಿದ್ದ ಬಂಗಾರವೇ ನಾಪತ್ತೆ; ಠಾಣೆ ಮೆಟ್ಟಿಲೇರಿದ ದಂಪತಿ

Exit mobile version