Site icon Vistara News

ಬೆಂಗಳೂರಿನಲ್ಲಿ ಕುಡಿದ ನಶೆಯಲ್ಲಿ ಇಬ್ಬರು ಕಾಶ್ಮೀರಿ ಸ್ನೇಹಿತೆಯರ ಮೇಲೆ ಅತ್ಯಾಚಾರ ಯತ್ನ; ಇಬ್ಬರು ಯುವಕರ ಬಂಧನ

harrassment

ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಇಬ್ಬರು ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಕಾಶ್ಮೀರ ಮೂಲದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ವಿಶಾಖಪಟ್ಟಣಂ ಮೂಲದ ಅಜಯ್ ಹಾಗೂ ಆದಿತ್ಯ ಬಂಧಿತರು. ಸಂತ್ರಸ್ತ ಯುವತಿಯರು ಕಾಶ್ಮೀರ ಮೂಲದವರಾಗಿದ್ದು, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಯುವತಿಯರು ಹಾಗೂ ಆರೋಪಿಗಳು ಒಂದೇ ಯೂನಿರ್ವಸಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದರಂತೆ. ಅದೇ ಸಲುಗೆ ಮೇಲೆ ಬೆಂಗಳೂರಿಗೆ ಬಂದಾಗಲೆಲ್ಲ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಹೊರರಾಜ್ಯದಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದವರು ಬೆಂಗಳೂರಿಗೆ ಬಂದಿದ್ದು, ಪಾರ್ಟಿ ಮಾಡುವ ನೆಪದಲ್ಲಿ ಫೆ.5ರಂದು ತಡರಾತ್ರಿ ಯುವತಿಯರನ್ನು ಕರೆಸಿಕೊಂಡಿದ್ದಾರೆ. ಬಳಿಕ ಯುವತಿಯರ ಮೇಲೆ ಕುಡಿದ ನಶೆಯಲ್ಲಿದ್ದ ಅಜಯ್ ಹಾಗೂ ಆದಿತ್ಯ ಲೈಂಗಿಕ ದೌರ್ಜನ್ಯ‌ ಎಸಗಿದ್ದಾರೆ. ಈ ವೇಳೆ ಯುವತಿಯರು ತಪ್ಪಿಸಿಕೊಂಡು, ಸ್ನಾನದ ಕೋಣೆಗೆ ಹೋಗಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಬಳಿಕ ರಾತ್ರಿಯಿಡೀ ಅಲ್ಲೇ ಕಳೆದು ಬೆಳಗ್ಗೆ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Boy Missing: ಚಿಕ್ಕಪೇಟೆ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ಸಮಯಪ್ರಜ್ಞೆ; ದಾರಿ ತಪ್ಪಿ ಬಂದಿದ್ದ ಅಲೆದಾಡುತ್ತಿದ್ದ ಬಾಲಕ ಪೋಷಕರ ಮಡಿಲಿಗೆ

ಅತ್ಯಾಚಾರಕ್ಕೆ ಯತ್ನ ಮಾಡಿದ್ದಾರೆ ಎಂದು ಯುವತಿಯರು ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ವಿವೇಕನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ, ವೈದ್ಯಕೀಯ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದಾರೆ.

Exit mobile version