Site icon Vistara News

Cow slaughter | ತುಮಕೂರಿನಲ್ಲಿ ಬಜರಂಗ ದಳ ಕಾರ್ಯಾಚರಣೆ: ಗೋಮಾಂಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ

Cow slaughter

ತುಮಕೂರು: ತುಮಕೂರಿನ ಬಜರಂಗ ದಳದಿಂದ ಗೋ ಮಾಂಸ ಮಾರಾಟ ಅಡ್ಡೆಯ (Cow slaughter) ಮೇಲೆ ದಾಳಿ ಮಾಡಲಿದ್ದು, ಒಬ್ಬ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ತುಮಕೂರು ನಗರದ ಹೊರವಲಯದ ಮರಳೂರು ದಿಣ್ಣೆಯಲ್ಲಿ ಗೋ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಬಜರಂಗ ದಳ ಕಾರ್ಯಕರ್ತರು ಅಲ್ಲಿಗೆ ದಾಳಿ ನಡೆಸಿದ್ದು, ದಸ್ತಗಿರ್ ಅಹಮದ್ (30) ಎಂಬಾತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ದಸ್ತಗಿರ್ ಅಹಮದ್ ತುಮಕೂರಿನ ಸದಾಶಿವ ನಗರದ ನಿವಾಸಿಯಾಗಿದ್ದು, ಆತನ ಕೈಯಲ್ಲಿದ್ದ 150 ಕೆಜಿಗೂ ಹೆಚ್ಚು ಕೆಜಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ.

ಈ ಭಾಗದಲ್ಲಿ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ನಡೆಯುತ್ತಿರುವ ಬಗ್ಗೆ ಹಿಂದಿನಿಂದಲೂ ಮಾಹಿತಿ ಇತ್ತು. ಇದೀಗ ಬಜರಂಗ ದಳ ಕಾರ್ಯಕರ್ತರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೇ ದಾಳಿ ಮಾಡಿದ್ದಾರೆ. ಆರೋಪಿಯನ್ನು ತುಮಕೂರಿನ ಜಯನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಇದನ್ನೂ ಓದಿ | Cow slaughter | ಕಸಾಯಿ ಖಾನೆಗೆ ಸಾಗಿಸುತ್ತಿದ್ದ 16 ಕರುಗಳನ್ನು ರಕ್ಷಿಸಿದ ಶ್ರೀ ರಾಮ ಸೇನೆ ಕಾರ್ಯಕರ್ತರು

Exit mobile version