Site icon Vistara News

Bar Fight: ಬಾರ್‌ನಲ್ಲಿ ಕಸ್ಟಮರ್‌ ನಿಂತಿದ್ದ ಜಾಗದ ವಿಚಾರಕ್ಕೆ ಕಿರಿಕ್‌; ಮನಸೋ ಇಚ್ಛೆ ಥಳಿಸಿದ ಸಿಬ್ಬಂದಿ

ಬೆಂಗಳೂರು: ಇಲ್ಲಿನ ಬಸವೇಶ್ವರನಗರ ಬಳಿಯ ವೆಂಕಟಗಿರಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ‌ ಬಾರ್‌ ಸಿಬ್ಬಂದಿ ಹಾಗೂ ಗ್ರಾಹಕನ ನಡುವೆ (Bar Fight) ಬಡಿದಾಟವಾಗಿದೆ. ಜಾಗದ ವಿಚಾರಕ್ಕೆ ಗ್ರಾಹಕನಿಗೂ ಬಾರ್‌ ಸಿಬ್ಬಂದಿಗೂ ಕಿರಿಕ್‌ ಶುರುವಾಗಿದೆ. ಬಳಿಕ ಸಿಬ್ಬಂದಿ ಮನಸ್ಸೋ ಇಚ್ಛೆ ಗ್ರಾಹಕನಿಗೆ ಥಳಿಸಿರುವ ಘಟನೆ ನಡೆದಿದೆ.

ಗಾಯಾಳು ಪೆರುಮಾಳ್‌

ಪೆರುಮಾಳ್ (25) ಹಲ್ಲೆಗೊಳಗಾದ ಗ್ರಾಹಕ. ಪೀಣ್ಯಾದಲ್ಲಿ ಲೇಥ್ ಕೆಲಸ ಮಾಡಿಕೊಂಡಿರುವ ಪೆರುಮಾಳ್‌ ಎಂದಿನಂತೆ ಬಾರ್‌ಗೆ ಬಂದು ಮದ್ಯ ತೆಗೆದುಕೊಂಡು ಕೌಂಟರ್ ಬಳಿಯೇ ಕುಡಿದು ನಿಂತಿದ್ದ. ಈ ವೇಳೆ ನಿಂತಿದ್ದ ಜಾಗದ ವಿಚಾರಕ್ಕೆ ಬಾರ್‌ ಸಿಬ್ಬಂದಿ ಹಾಗೂ ಪೆರುಮಾಳ್‌ ನಡುವೆ ಸಣ್ಣ ಕಿರಿಕ್‌ ಆಗಿದೆ. ಗಲಾಟೆಯಾದ ಮೇಲೆ ಸಮ್ಮನಾಗಿದ್ದ ಸಿಬ್ಬಂದಿ, ಪೆರುಮಾಳ್‌ ಹೊರಗೆ ಕಾಲಿಡುತ್ತಿದ್ದಂತೆ ಗುಂಪು ಸಮೇತ ಹಲ್ಲೆ ನಡೆಸಿದ್ದಾರೆ.

ಇತ್ತ ಸ್ಥಳಕ್ಕೆ ಪೊಲೀಸರು ಬಂದರೂ ಗಾಯಾಳು ಪರುಮಾಳ್‌ನನ್ನು ಆಸ್ಪತ್ರೆಗೆ ಸೇರಿಸುವ ಸೌಜನ್ಯ ತೋರಿಸಿಲ್ಲ. ಜತೆಗೆ ಘಟನೆ ನಡೆದ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬಳಿಕ ಪೆರುಮಾಳ್ ಸ್ನೇಹಿತ ಸುರೇಶ್ ಎಂಬಾತ ಬಂದು ಗಾಯಗೊಂಡಿದ್ದವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಇದನ್ನೂ ಓದಿ: Tiger Attack: ಮೈಸೂರಲ್ಲಿ ಚಿರತೆ ದಾಳಿಗೆ ಬಾಲಕ ಮೃತ್ಯು ಬೆನ್ನಲ್ಲೇ ಹುಲಿ ದಾಳಿಗೆ ಯುವಕ ಬಲಿ; ಒಂದೇ ದಿನದ ಅಂತರದಲ್ಲಿ 2 ಸಾವು

Exit mobile version