Site icon Vistara News

Murder Case : ಮಲಗಿದ್ದವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಕಟುಕ

Murder Case

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿ, ಹೊಲದ ಸೀಮೆಯ ವಿಚಾರಕ್ಕೆ ಕೊಲೆಮಾಡಿರುವ (Murder Case) ಘಟನೆ ನಡೆದಿದೆ. ಬೀರಸಿದ್ದೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮಡ್ಡೆಪ್ಪ ಎನ್ನುವ 47 ವರ್ಷದ ವ್ಯಕ್ತಿ ಮಲಗಿದ್ದ.

ಮಡ್ಡೆಪ್ಪ ಮಲಗಿರುವಾಗ ಬೀರಪ್ಪ ಸಿದ್ದಪ್ಪ ಸುಣಧೋಳಿ ಎಂಬುವವನು ಬಂದು ಮಾರಕಾಸ್ತ್ರದಿಂದ ಮೇಲೆ ಹಲ್ಲೆ ನಡೆಸಿದ್ದಾನೆ. ದೇವಸ್ಥಾನದ ಕಟ್ಟೆಯು ಸಂಪೂರ್ಣವಾಗಿ ರಕ್ತಚಿತ್ತವಾಗಿದೆ. ತೀವ್ರ ಹಲ್ಲೆಗೊಳಗಾದ ಮಡ್ಡೆಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮಡ್ಡೆಪ್ಪ ಸಾವನ್ನಪ್ಪಿದ್ದಾನೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.

Exit mobile version