Site icon Vistara News

Farmer death | ಗದ್ದೆಗೆ ನೀರು ಬಿಡಲು ಹೋದ ರೈತ ವಿದ್ಯುತ್‌ ಶಾಕ್‌ನಿಂದ ಸಾವು

farmer death

ಬಳ್ಳಾರಿ: ಗದ್ದೆಗೆ ನೀರು ಕಟ್ಟಲು ಹೋದ ರೈತ ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಎಮ್ಮಿಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ರೈತ ಎಮ್ಮಿಗನೂರು ಗ್ರಾಮದ ನಾಗರಾಜ (34) ಎಂಬವರು. ಭತ್ತದ ಗದ್ದೆಗೆ ನೀರು ಬಿಡಲು ಪಂಪ್‌ಸೆಟ್ ಚಾಲನೆ ಮಾಡಲು ಹೋದ ವೇಳೆ ಘಟನೆ ನಡೆದಿದೆ. ಕರೆಂಟ್ ಶಾಕ್‌ನಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಕಂಪ್ಲಿ ಶವಾಗಾರದಲ್ಲಿ ಶವಪರೀಕ್ಷೆ ನಡೆದಿದೆ. ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ನಾಗರಾಜರಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಇದ್ದಾರೆ.

Exit mobile version