Site icon Vistara News

Bengaluru Murder Case: ಬೆಂಗಳೂರಿನಲ್ಲಿ ಅತ್ತೆಗೆ ಚಾಕು ಹಾಕಿ ಪಾಪಿ ಅಳಿಯ ಪರಾರಿ

Son-in-law murders mother-in-law in bengaluru

Son-in-law murders mother-in-law in bengaluru

ಬೆಂಗಳೂರು: ಕೆಂಗೇರಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿ ಅಳಿಯನೊಬ್ಬ ಅತ್ತೆಗೆ ಚಾಕು ಇರಿದು ಹತ್ಯೆ (Bengaluru Murder Case) ಮಾಡಿದ್ದಾನೆ. ಏಳಲ್‌ ಅರಸಿ (48) ಕೊಲೆಯಾದ ದುರ್ದೈವಿ.

ಮೊಮ್ಮಗಳಿಗೆ ಎಕ್ಸಾಂ ಇದೆ ಕಳಿಸು ಎಂದು ಕೇಳಿದ್ದಕ್ಕೆ ಅಳಿಯ ದಿವಾಕರ್‌ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಏಳಲ್‌ ಅರಸಿಗೆ ಐವರು ಮಕ್ಕಳಿದ್ದು, ಅದರಲ್ಲಿ ಮೊದಲ ಮಗಳನ್ನು ದಿವಾಕರ್‌ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಕೋಲಾರದ ಕೆ.ಜಿ.ಎಫ್‌ನಲ್ಲಿ ವಾಸವಿದ್ದ ದಿವಾಕರ್‌ ದಂಪತಿ ಮಧ್ಯೆ ಕಾರಣಾಂತರಗಳಿಂದ ಆಗಾಗ ಜಗಳ ನಡೆಯುತ್ತಿತ್ತು.

ಇತ್ತೀಚೆಗೆ ಆರೋಪಿ ದಿವಾಕರ್‌ ತನ್ನ ಮಗಳಿಗೆ ಎಕ್ಸಾಂ ಇದ್ದರೂ ಬೆಂಗಳೂರಿನ ಅಕ್ಕನ ಮನೆಗೆ ಕರೆತಂದಿದ್ದ. ಹೀಗಾಗಿ ಮಗುವನ್ನು ಕರೆದುಕೊಂಡು ಹೋಗಲು ಅತ್ತೆ ಏಳಲ್‌ ಅರಸಿ ಬಂದಿದ್ದರು. ಮೊಮ್ಮಗಳಿಗೆ ಎಕ್ಸಾಂ ಇದೆ ಕಳಿಸು ಎಂದು ಅಳಿಯ ದಿವಾಕರ್‌ಗೆ ಕೇಳಿದ್ದರು. ಇದಕ್ಕೆ ಒಪ್ಪದ ದಿವಾಕರ್‌ ಕ್ಯಾತೆ ತೆಗೆದು ಜಗಳಕ್ಕೆ ನಿಂತಿದ್ದ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಸಿಟ್ಟಿಗೆದ್ದ ದಿವಾಕರ್‌ ಚಾಕುವಿನಿಂದ ಅತ್ತೆಗೆ ಇರಿದಿದ್ದಾನೆ.

ಇದನ್ನೂ ಓದಿ: RBI Notice: ಶಿಂಷಾ ಸಹಕಾರ ಬ್ಯಾಂಕ್‌ ಸೇರಿ 5 ಬ್ಯಾಂಕ್‌ಗಳಿಂದ ಹಣ ತೆಗೆಯದಂತೆ ಗ್ರಾಹಕರಿಗೆ ನಿರ್ಬಂಧ

ಗಂಭೀರ ಗಾಯಗೊಂಡಿದ್ದ ಏಳಲ್ ಅರಸಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸದ್ಯ ಆರೋಪಿ ದಿವಾಕರ್‌ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version