Site icon Vistara News

Assault Case : ಹೋಟೆಲ್‌ಗೆ ನುಗ್ಗಿ ತಮಿಳುನಾಡು ಡಿಎಂಕೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌!

DMK leader guruswamy attacked by rowdies

ಬೆಂಗಳೂರು: ಹೋಟೆಲ್‌ಗೆ ಬಂದ ಕೆಲವರು ತಮ್ಮಗಿಷ್ಟದ ತಿಂಡಿ ಆರ್ಡರ್‌ ಮಾಡಿ ಕಾಯುತ್ತಿದ್ದರು. ಮಕ್ಕಳೊಂದಿಗೆ ಬಂದ ಪೋಷಕರು ರುಚಿ ರುಚಿಯಾದ ಊಟ ಸವಿಯುತ್ತಿದ್ದರು. ಜಸ್ಟ್‌ 20 ಸೆಕೆಂಡ್‌ನಲ್ಲಿ ಆ ಹೋಟೆಲ್‌ನ ಚಿತ್ರಣವೇ ಬದಲಾಗಿತ್ತು. ತಮಿಳುನಾಡಿನ ಮದುರೈನ ನಟೋರಿಯಸ್‌ ರೌಡಿ ಪಾಂಡಿಯನ್ ಗ್ಯಾಂಗ್‌ ಮಚ್ಚು-ಲಾಂಗು (Assault Case) ಝಳಪಿಸಿದ್ದರು.

ಇಲ್ಲಿನ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ತಮಿಳುನಾಡು ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಮೇಲೆ ಹಲ್ಲೆ ನಡೆದಿದೆ. 70 ಕ್ಕೂ ಹೆಚ್ಚು ಬಾರಿ ತಲ್ವಾರ್, ಮಚ್ಚು, ಲಾಂಗಿನಿಂದ ಹಲ್ಲೆ ಮಾಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 4 ರಂದು ಸಂಜೆ 4.30ಕ್ಕೆ ನಡೆದಿರುವ ಈ ಡೆಡ್ಲಿ ಅಟ್ಯಾಕ್‌ ಬೆಚ್ಚಿ ಬೀಳಿಸುವಂತಿದೆ.

ಇದನ್ನೂ ಓದಿ: Self Harming: ಸಾಯಲೆಂದೇ ಧರ್ಮಸ್ಥಳಕ್ಕೆ ಹೋಗಿದ್ದ ಆಕೆ ಮರಳಿ ಬಂದು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಳು

ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಅವರು ಹೋಟೆಲ್‌ವೊಂದರಲ್ಲಿ ಬ್ರೋಕರ್ ಜತೆಗೆ ಕೂತು ಕಾಫಿ ಕುಡಿಯುತ್ತಾ ಮಾತಾಡುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಬಂದ ಮದುರೈನ ನಟೋರಿಯಸ್‌ ರೌಡಿ ಪಾಂಡಿಯನ್‌ ಗ್ಯಾಂಗ್‌ ಒಮ್ಮೆಲೆ ಮುಗಿಬಿದ್ದು ದಾಳಿ ಮಾಡಿದೆ.

ಸುಮಾರು ಐದಾರು ಜನರ ತಂಡ ಗುರುಸ್ವಾಮಿಯವರನ್ನು ಹೋಟೆಲ್ ತುಂಬಾ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. 70 ಕ್ಕೂ ಹೆಚ್ಚು ಬಾರಿ ಲಾಂಗ್ ಏಟು ಬಿದ್ದರೂ ಗುರುಸ್ವಾಮಿ ಪ್ರಾಣಾಪಾಯದಿಂದ ಪಾರಾಗಿ ಬದುಕುಳಿದಿದ್ದಾರೆ. ಇತ್ತ ರೌಡಿಗಳು ದಾಳಿ ಮಾಡುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿ ಜನರು, ಹೋಟೆಲ್‌ ಸಿಬ್ಬಂದಿ ಓಡಿ ಹೋಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ವಿಡಿಯೊ

ಸದ್ಯ ಘಟನೆ ಸಂಬಂಧ ಕಾರ್ತಿಕ್, ವಿನೋದ್ ಕುಮಾರ್, ಪ್ರಸನ್ನ ಎಂಬುವವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ದಾಳಿ ಯಾಕಾಗಿ ನಡೆದಿದೆ ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ. ಗಾಯಾಳು ಗುರುಸ್ವಾಮಿಗೆ ಚಿಕಿತ್ಸೆ ಮುಂದುವರಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version