Site icon Vistara News

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

18th CII ITC Sustainable Award Ceremony

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಅತ್ಯುತ್ತಮ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಕಾರ್ಯಗಳಿಗೆ ಈಚೆಗೆ ನಡೆದ 18ನೇ ಸಿಐಐ-ಐಟಿಸಿ ಸಸ್ಟೈನಬಲ್ ಅವಾರ್ಡ್ ಸಮಾರಂಭದ ’ಮಹತ್ವದ ಸಾಧನೆಗೆ ಪ್ರಶಂಸೆ” ವಿಭಾಗದಲ್ಲಿ (Bengaluru News) ಗುರುತಿಸಿಕೊಂಡಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ (ಟಿಕೆಎಂ) ನ ಸಿಎಸ್‌ಆರ್ ಚಟುವಟಿಕೆಗಳನ್ನು ಸಿಐಐ-ಐಟಿಸಿ ಮೌಲ್ಯಮಾಪಕರು ಹಲವು ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದ್ದು, ಎಲ್ಲಾ ಸಿಎಸ್‌ಆರ್ ಯೋಜನೆಗಳಲ್ಲಿ ಅಳವಡಿಸಿಕೊಂಡ ಕಲಿಕೆ ಮತ್ತು ಇನ್ನೋವೇಷನ್‌ಗಳು ಇದರಲ್ಲಿ ಸೇರಿವೆ. ಕಂಪನಿಯ ಸಾಮಾಜಿಕ ಕಾರ್ಯಕ್ರಮಗಳು ಈ ಮಾನದಂಡಗಳಿಗೆ ಅನುಗುಣವಾಗಿ ಅನುಷ್ಠಾನವಾಗಿವೆ. ಇದಲ್ಲದೆ, ಟಿಕೆಎಂ ತನ್ನ ಸಿಎಸ್‌ಆರ್ ಅನುಷ್ಠಾನದ ಭಾಗವಾಗಿ, ಪರಿಣಾಮಗಳನ್ನು ಸಕ್ರೀಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಸಮಗ್ರ ಅಧ್ಯಯನ, ವಸ್ತುನಿಷ್ಠತೆ, ವಿಶ್ವಾಸಾರ್ಹತೆ ಮತ್ತು ಅನುಷ್ಠಾನದ ಬದ್ಧತೆಯನ್ನು ಬೋರ್ಡ್ ಮಟ್ಟದ ಸಿಎಸ್‌ಆರ್ ಸಮಿತಿಯ ಮೇಲ್ವಿಚಾರಣೆಗೆ ಒಳಪಡಲಿದ್ದು, ಮೌಲ್ಯಮಾಪನವನ್ನೂ ಸಹ ಮಾಡಲಾಗುತ್ತದೆ.

ಹಲವು ವರ್ಷಗಳಲ್ಲಿ ಕಂಪನಿಯು ತನ್ನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸುಸ್ಥಿರ ಕಾರ್ಯಕ್ರಮಗಳ ಮೂಲಕ ಸಮುದಾಯ ವರ್ಧನೆ ಮತ್ತು ಪರಿಸರ ನಿರ್ವಹಣೆಯನ್ನು ಹೆಚ್ಚಿಸಲು ವಿಶೇಷ ಮೌಲ್ಯಮಾಪನ ಸಾಧನ ಮತ್ತು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಟಿಕೆಎಂನ ಸಿಎಸ್‌ಆರ್ “ಸಮುದಾಯಗಳನ್ನು ಸಬಲೀಕರಣಗೊಳಿಸುವುದು” ಮತ್ತು “”ಪರಿಸರವನ್ನು ಸಮೃದ್ಧಗೊಳಿಸುವುದು” ಎಂಬ ಎರಡು ಅಂಶಗಳನ್ನು ಒಳಗೊಂಡಿದ್ದು, ನಾವೀನ್ಯತೆಯಿಂದ ಚಾಲನೆ ಪಡೆದುಕೊಳ್ಳುವ ಮತ್ತು ನಿರಂತರ ಸುಧಾರಣೆ ತತ್ವದಿಂದ ಮಾರ್ಗದರ್ಶನ ಪಡೆದ ಟಿಕೆಎಂನ ಸಿಎಸ್‌ಆರ್ ಯೋಜನೆಗಳು ಕೌಶಲ್ಯ ಅಭಿವೃದ್ಧಿ, ರಸ್ತೆ ಸುರಕ್ಷತೆ, ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ ಮತ್ತು ವಿಪತ್ತು ನಿರ್ವಹಣೆ ಎಂಬ ಆರು ಪ್ರಮುಖ ಕ್ಷೇತ್ರಗಳಲ್ಲಿ ಅನುಷ್ಠಾನಗೊಳ್ಳುತ್ತವೆ. ಟಿಕೆಎಂನ ಸುಸ್ಥಿರ ಸಿಎಸ್‌ಆರ್ ಮಾದರಿಯು ಸಮುದಾಯ ಮಾಲೀಕತ್ವ, ಏಕೀಕೃತ ಮಧ್ಯಸ್ಥಿಕೆಗಳು, ವರ್ತನೆಯ ಬದಲಾವಣೆಗಳು (Behavior Changes) ಮತ್ತು ಭಾಗೀದಾರರ ಪಾಲ್ಗೊಳ್ಳುವಿಕೆಯನ್ನು ಸಾರಿ ಹೇಳಿದೆ.

ಟಿಕೆಎಂನ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತದ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಈ ಕುರಿತು ಮಾತನಾಡಿ, “18 ನೇ ಸಿಐಐ-ಐಟಿಸಿ ಸುಸ್ಥಿರತೆ ಪ್ರಶಸ್ತಿಯನ್ನು ಸ್ವೀಕರಿಸಲು ನಮಗೆ ಗೌರವವಿದೆ. ವ್ಯಾಪಾರ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಯ ನಡುವೆ ಇರುವ ಬಲವಾದ ಸಂಪರ್ಕ ಮತ್ತು ಪಾಲ್ಗೊಳ್ಳುವಿಕೆಯನ್ನು ನಾವು ದೃಢವಾಗಿ ನಂಬುತ್ತೇವೆ. ಶಾಶ್ವತ ಮಧ್ಯಸ್ಥಿಕೆಗಳ ಮೇಲೆ ಗಮನ ಹರಿಸಿರುವ ನಾವು ವಿಶೇಷವಾಗಿ ಚೈಲ್ಡ್ ಟು ಕಮ್ಯೂನಿಟಿ ವಿಧಾನದ ಮೂಲಕ ಸಕಾರಾತ್ಮಕ ವರ್ತನೆಯ ಬದಲಾವಣೆಗಳನ್ನು ಹೆಚ್ಚಿಸಲು ಮುಂದಾಗಿದ್ದೇವೆ.

ಇದನ್ನೂ ಓದಿ: Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ

ಸಮಾಜದೊಂದಿದೆ ಸಕ್ರೀಯವಾಗಿ ತೊಡಗಿಸಿಕೊಳ್ಳುವುದು, ಅವರ ಅಗತ್ಯಗಳು, ಆಕಾಂಕ್ಷೆಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸುಸ್ಥಿರತೆಯೊಂದಿಗೆ ಅವರು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಚಿಂತನೆಯ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ನಿರಂತರ ಪ್ರಯತ್ನಗಳಾಗಿವೆ ಎಂದು ತಿಳಿಸಿದ್ದಾರೆ.

ದೀರ್ಘಕಾಲೀನ ಕಾರ್ಯತಂತ್ರ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಹಯೋಗ ಮತ್ತು ಬೆಂಬಲಕ್ಕಾಗಿ ಮಧ್ಯಸ್ಥಗಾರರನ್ನು ತೊಡಗಿಸಿಕೊಳ್ಳುವುದು, ಸಮಯೋಚಿತ ಯೋಜನೆಯ ಕಾರ್ಯಗತಗೊಳಿಸುವಿಕೆ, ಯೋಜನೆಯ ಪ್ರಗತಿಯನ್ನು ಪತ್ತೆಹಚ್ಚಲು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಾರ್ಯವಿಧಾನಗಳನ್ನು ಜಾರಿಗೆ ತರುವ ಮೂಲಕ ಸಿಎಸ್‌ಆರ್‌ನಲ್ಲಿ ಸುಸ್ಥಿರತೆಯನ್ನು ಸಾಧಿಸುವಲ್ಲಿ ಟಿಕೆಎಂ ಯಶಸ್ವಿಯಾಗಿದೆ.

ಸಮುದಾಯದಲ್ಲಿ ಅರ್ಥಪೂರ್ಣ ಸಕಾರಾತ್ಮಕ ಬದಲಾವಣೆಯನ್ನು ತರುವ ಟೊಯೋಟಾದ ಬದ್ಧತೆಯನ್ನು ಈ ಪ್ರಶಸ್ತಿ ಪುನರುಚ್ಚರಿಸುತ್ತದೆ. ಈವರೆಗೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾವು 2.3 ದಶಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ತಲುಪಿದ್ದೇವೆ. ನಾವು ವಿಕಸನ ಮತ್ತು ಹೊಂದಿಕೊಳ್ಳುವುದನ್ನು ಮುಂದುವರೆವರೆಸುತ್ತೇವೆ. ಸಾಮಾಜಿಕ ಅಭಿವೃದ್ಧಿಗೆ ಬಲವಾದ ಮತ್ತು ಅರ್ಥಪೂರ್ಣ ಮಧ್ಯಸ್ಥಿಕೆಯ ಮೂಲಕ ನಮ್ಮ ಎಲ್ಲಾ ಸಿಎಸ್‌ಆರ್ ಯೋಜನೆಗಳಿಗೆ ಗರಿಷ್ಠ ಸಂಪನ್ಮೂಲ ಹಂಚಿಕೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ.

ಇದನ್ನೂ ಓದಿ: Heat Stroke: ನೀರು ಕುಡಿದು ತಂಪಾಗಿರಿ, ಹೀಟ್‌ ಸ್ಟ್ರೋಕ್‌ ತಪ್ಪಿಸಿಕೊಳ್ಳಿ

ಜಾಗತಿಕ ದೃಷ್ಟಿಕೋನದಲ್ಲಿ ಬೇರೂರಿರುವ ಟಿಕೆಎಂನ ಸಿಎಸ್‌ಆರ್ ಕಾರ್ಯಕ್ರಮಗಳು ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಸಮಾಜವನ್ನು ಬೆಳೆಸಲು ಸಮರ್ಪಿತವಾಗಿವೆ ಎಂದು ಅವರು ತಿಳಿಸಿದ್ದಾರೆ.

Exit mobile version