Site icon Vistara News

Road accident | ಟಿಪ್ಪರ್‌ ಡಿಕ್ಕಿಯಾಗಿ ಬೈಕ್‌ ಸವಾರ ಸಾವು, ಮತ್ತೊಬ್ಬ ಗಂಭೀರ

Bhatkal exposed the reason behind the massacre of four members of the same family Police are on the lookout for the accused

ಬೆಂಗಳೂರು: ಬೆಂಗಳೂರಿನಲ್ಲಿ ಟಿಪ್ಪರ್‌ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರರೊಬ್ಬರು ಮೃತಪಟ್ಟಿರುವ ಹಾಗೂ ಮತ್ತೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ (Road accident ) ನಡೆದಿದೆ.

ದೇವರಾಜ್ ಎಂಬುವರೇ ಮೃತಪಟ್ಟಿರುವ ಬೈಕ್ ಸವಾರನಾಗಿದ್ದಾರೆ. ಬೈಕ್ ನಲ್ಲಿ ದೇವರಾಜ್ ಹಾಗೂ ಅವರ ಸ್ನೇಹಿತ ಸಂಚರಿಸುತ್ತಿದ್ದರು. ಸ್ನೇಹಿತನ ಹೆಸರೂ ದೇವರಾಜ್‌ ಎಂದಾಗಿದೆ. ಅಪಘಾತದಲ್ಲಿ ಅವರ ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆ.ಆರ್ ಮಾರ್ಕೆಟ್ ಗೆ ಹೋಗುವಾಗ ಬೈಕ್‌ಗೆ ಟಿಪ್ಪರ್‌ ಡಿಕ್ಕಿ ಹೊಡೆದಿದೆ. ಮೈಸೂರು ರಸ್ತೆಯ ಡಿಮಾರ್ಟ್ ಬಳಿ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ದೇವರಾಜ್‌ ಅವರು ಹೊಸಕೆರೆಹಳ್ಳಿ ನಿವಾಸಿ. ಚಿಕ್ಕಪೇಟೆ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Exit mobile version