Site icon Vistara News

Death News | ಬಿಎಂಎಸ್ ಹಿರಿಯ ಚೇತನ ಸೂರ್ಯನಾರಾಯಣರಾವ್ ನಿಧನ

Death News

ಬೆಂಗಳೂರು: ಭಾರತೀಯ ಮಜ್ದೂರ್ ಸಂಘದ ಹಿರಿಯ ಚೇತನ ಕೆ.ಎಂ. ಸೂರ್ಯನಾರಾಯಣ ರಾವ್(70) ಅವರು ಭಾನುವಾರ ಸಂಜೆ ಅನಾರೋಗ್ಯದಿಂದ ನಗರದಲ್ಲಿ ನಿಧನರಾದರು(Death News).

ಬಿಎಂಎಸ್‌ನ ದಕ್ಷಿಣ ಭಾರತದ ಸಹ ಸಂಘಟನಾ ಕಾರ್ಯದರ್ಶಿಯಾಗಿ, ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇರಿ ಸಂಘಟನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ. ಸಾರಿಗೆ‌ ಸಂಸ್ಥೆಯ ಬಸ್ ನಿರ್ವಾಹಕ ಹುದ್ದೆಗೆ ರಾಜೀನಾಮೆ ನೀಡಿ, ಬಿಎಂಎಸ್‌ಗೆ ತಮ್ಮ ಜೀವನ ಮೀಸಲಿಟ್ಟಿದ್ದ ಇವರು, ಶ್ರೀರಾಮ ಜನ್ಮ ಭೂಮಿಯ ಕರಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಉತ್ತಮ ಭಾಷಣಕಾರರು, ಶ್ರಮ ಜೀವಿಯಾಗಿದ್ದ ಇವರ ನಿಧನಕ್ಕೆ ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆಯಿತು‌.

ಇದನ್ನೂ ಓದಿ | Pothole | ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್‌ ಸವಾರ ಬಲಿ; ಸಾರ್ವಜನಿಕರ ಆಕ್ರೋಶ

Exit mobile version