Site icon Vistara News

Book Release: ಬೇಕು ಅನ್ನೋದೇ ಬಡತನ, ಸಾಕು ಅನ್ನೋದೇ ಸಿರಿತನ!; ಸಾವಣ್ಣ ಪ್ರಕಾಶನದ ಪುಸ್ತಕಗಳ ಬಿಡುಗಡೆ

book Release

ಬೆಂಗಳೂರು: ಸಾವಣ್ಣ ಪ್ರಕಾಶನ ಪ್ರಕಟಿಸಿರುವ ರಂಗಸ್ವಾಮಿ ಮೂಕನಹಳ್ಳಿ ಅವರ “ಸಿರಿವಂತಿಕೆಗೆ ಸರಳ ಸೂತ್ರಗಳುʼ ಸೇರಿದಂತೆ 5 ಕೃತಿಗಳು (Book Release) ಬೆಂಗಳೂರಿನಲ್ಲಿ ಭಾನುವಾರ ಅರ್ಥಪೂರ್ಣ ಸಂವಾದದೊಂದಿಗೆ ಬಿಡುಗಡೆಯಾದವು.

ರಂಗಸ್ವಾಮಿ ಮೂಕನಹಳ್ಳಿ ಅವರ ʼಸಿರಿವಂತಿಕೆಗೆ ಸರಳ ಸೂತ್ರಗಳುʼ, ಡಾ. ನಾ. ಸೋಮೇಶ್ವರ ಅವರ “ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?ʼ, ಜಗದೀಶ ಶರ್ಮಾ ಸಂಪ ಅವರ “ಮಹಾಭಾರತ ಅನ್ವೇಷಣೆʼ ಮತ್ತು ಸತೀಶ್ ವೆಂಕಟಸುಬ್ಬು ಅವರ “ಸೈಬರ್ ಕ್ರೈಂ ತಡೆಗಟ್ಟುವುದು ಹೇಗೆ? (ಕನ್ನಡ ಮತ್ತು ಇಂಗ್ಲಿಷ್) ಬಿಡುಗಡೆಗೊಂಡ ಕೃತಿಗಳು.

ಈ ಕಾರ್ಯಕ್ರಮದಲ್ಲಿ ಲೇಖಕರೊಡನೆ ವಿಶೇಷ ಸಂವಾದವನ್ನು‌ ಏಮ್ ಹೈ ಕನ್ಸಲ್ಟಿಂಗ್ ಸಿಇಒ, ಅಂಕಣಕಾರರು, ಸ್ಟಾರ್ಟಪ್ ಮಾರ್ಗದರ್ಶಕರಾದ ಎನ್. ರವಿಶಂಕರ್ ಅವರು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಎನ್. ರವಿಶಂಕರ್ ಅವರು ನಾಲ್ಕೂ ಪುಸ್ತಕಗಳ ಹೂರಣವನ್ನು ಒಂದಕ್ಕೊಂದು ಬೆಸೆದು, “ಬೇಕು ಮತ್ತು ಸಾಕುʼ ಎಂಬ ಚೌಕಟ್ಟಿನಲ್ಲಿ ಸಂವಾದವನ್ನು ಕುತೂಹಲ ಹುಟ್ಟಿಸುತ್ತ ಮುನ್ನಡೆಸಿದ್ದು ಬೆರಗು ಮೂಡಿಸಿತು. ಈ ಸಂವಾದದಲ್ಲಿ ಲೇಖಕರು ವ್ಯಕ್ತಪಡಿಸಿದ ಅಭಿಮತದ ಸಾರ ಇಲ್ಲಿದೆ.

ರಂಗಸ್ವಾಮಿ ಮೂಕನಹಳ್ಳಿ

ಜಗದೀಶ ಶರ್ಮಾ ಸಂಪ

ಡಾ. ನಾ. ಸೋಮೇಶ್ವರ

ಸತೀಶ್‌ ವೆಂಕಟಸುಬ್ಬು

ಇದನ್ನೂ ಓದಿ | Pustaka Sante : ವೀರಲೋಕ ಪುಸ್ತಕ ಸಂತೆ ಅದ್ಧೂರಿ ಆರಂಭ, ವೆರಿ ಗುಡ್ ಎಂದು ಬೆನ್ನುತಟ್ಟಿದ ಸಿಎಂ ಸಿದ್ದರಾಮಯ್ಯ

ಸಪ್ನ ಬುಕ್‌ ಹೌಸ್‌ನ ದೊಡ್ಡೇಗೌಡ ಅವರು “ಸಾವಣ್ಣ ಪ್ರಕಾಶನದ ಜಮೀಲ್‌ ಹೃದಯವಂತ. ಅನ್ಯ ಭಾಷಿಕರಾದರೂ ಕನ್ನಡ ಭಾಷೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.

ಖ್ಯಾತ ಲೇಖಕ ಜೋಗಿ ಅವರು ಮಾತನಾಡಿ “ಜಮೀಲ್‌ ಅವರು ಮರು ಮದ್ರಣದ ಪರಿಣತ. ಜಮೀಲ್‌ ಅವರ ಪುಸ್ತಕ ಪ್ರೀತಿ; ಪುಸ್ತಕವನ್ನು ಅವರು ಲಾಲಿಸಿ, ಪೋಷಿಸುವ ರೀತಿ ಮೆಚ್ಚುವಂಥದ್ದುʼʼ ಎಂದು ಪ್ರಶಂಸಿಸಿದರು.

Exit mobile version