Site icon Vistara News

Death News | ಕೆರೆಯಲ್ಲಿ ಮೀನು ಹಿಡಿಯಲು ಹೋದ ಶಿವ, ಶಂಕರ್‌ ನೀರುಪಾಲು; ಚಿರಂಜೀವಿ ಪಾರು

ಬೆಂಗಳೂರು: ಇಲ್ಲಿನ ನೈಸ್ ರಸ್ತೆ ಸಮೀಪದ ಹೆಮ್ಮಿಗೆಪುರ ಕೆರೆಯಲ್ಲಿ ಮೀನು ಹಿಡಿಯಲು ಹೋದವರು (Death News) ನೀರುಪಾಲಾಗಿದ್ದಾರೆ. ಶನಿವಾರ ಸಂಜೆ ಶಿವ, ಶಂಕರ್ ಹಾಗು ಚಿರಂಜೀವಿ ಎಂಬುವವರು ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದಾರೆ.

ಈ ವೇಳೆ ನೀರಿನಲ್ಲಿ ತೆಪ್ಪ ಮಗುಚಿ ಬಿದ್ದಿದೆ. ಚಿರಂಜೀವಿ ಎಂಬಾತ ಈಜಿ ದಡ ಸೇರಿದ್ದರೆ, ಶಿವ ಹಾಗೂ ಶಂಕರ್ ನೀರಿನಲ್ಲಿ ಮುಳುಗಿದ್ದಾರೆ. ಭಾನುವಾರ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಮೂವರು ಗೊಲ್ಲಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | Death News | ಮೀನು ಹಿಡಿಯಲು ಹೋದವನು ನೀರು ಪಾಲು; ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಸಾವು

man-drowened-in-Hemmigepura-river-while-fishing

Exit mobile version