Site icon Vistara News

Karnataka Election : ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪರ ಪ್ರಚಾರಕ್ಕೆ ಹೋಗಿದ್ದಕ್ಕೆ ಮನೆಯ ಕಂಪೌಂಡ್‌ ಧ್ವಂಸ

bjp vs congress

ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದಕ್ಕೆ ಮನೆ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಅವಾಚ್ಯ ಶಬ್ದಗಳಿಂದ (Karnataka Election) ನಿಂದಿಸಿದ ಬಿಜೆಪಿಯ ಸ್ಥಳೀಯ ಮುಖಂಡನಿಗೆ ಮಹಿಳೆಯಿಂದ ಕಪಾಳಮೊಕ್ಷವೂ ನಡೆದಿದೆ.

ಜಿಪಂ ಸದಸ್ಯ ಉಮೇಶ್‌ ಎಂಬುವರಿಗೆ ಚಿಕ್ಕಗೊಲ್ಲರಹಟ್ಟಿ ರಂಗಮ್ಮ ಎಂಬಾಕೆಯಿಂದ ಕಪಾಳಮೋಕ್ಷವಾಗಿದೆ. ರಂಗಮ್ಮ ಹಾಗೂ ಪುತ್ರ ನವೀನ್ ಚಿಕ್ಕಗೊಲ್ಲರಹಟ್ಟಿಯ ಸರ್ಕಾರಿ ಜಮೀನಿನಲ್ಲಿ‌ ಮನೆ ಕಟ್ಟಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಮೂರು ದಿನದ ಹಿಂದೆ ಮನೆಗೆ ನವೀನ್ ಕಾಂಪೌಂಡ್ ನಿರ್ಮಿಸಿದ್ದರು.

ಈ ಹಿಂದೆ ಬಿಜೆಪಿ ನಾಯಕ ಉಮೇಶ ಜೊತೆಗಿದ್ದ‌ ರಂಗಮ್ಮನ ಪುತ್ರ ನವೀನ್, ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದರೆನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಬಿಜೆಪಿ ಸ್ಥಳೀಯ ನಾಯಕರು ಏಕಾಏಕಿ ಹೋಗಿ ಅಂಗನವಾಡಿ ಜಾಗದಲ್ಲಿದ್ದ ಮನೆಯ ಕಾಂಪೌಂಡ್ ತೆರವುಗೊಳಿಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ರಂಗಮ್ಮನ ಮೇಲೆ ಉಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಸಂದರ್ಭ ಹಲ್ಲೆ ಯತ್ನ ನಡೆಯಿತು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version