Site icon Vistara News

Kalotsava: ಮಲ್ಲೇಶ್ವರದಲ್ಲಿ ಫೆ.24ರಂದು ಕಲೋತ್ಸವ

Kalotsava

ಬೆಂಗಳೂರು: ಸಪ್ತಕ ಸಂಸ್ಥೆ, ಆರ್ಟ್‌ ಮಂತ್ರಮ್‌ ವತಿಯಿಂದ ಫೆಬ್ರವರಿ 24ರಂದು ಸಂಜೆ 5.30ಕ್ಕೆ ʼಕಲೋತ್ಸವʼವನ್ನು ನಗರದ ಮಲ್ಲೇಶ್ವರದ ರೈಲ್ವೆ ನಿಲ್ದಾಣ ಹತ್ತಿರದ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಖ್ಯಾತ ಕಲಾವಿದರು ಕಲೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಮುಂಬೈನ ಗಾಯಕ ಧನಂಜಯ ಹೆಗಡೆ, ಸಾಗರದ ತಬಲಾ ವಾದಕ ಯೋಗೀಶ ಭಟ್ಟ, ಉಡುಪಿಯ ಹಾರ್ಮೋನಿಯಂ ವಾದಕ ಪ್ರಸಾದ ಕಾಮತ ಮತ್ತು ಪಂ. ಉಮಾಕಾಂತ ಗುಂಡೆಚಾ ಹಾಗೂ
ಶ್ರೀ ಅನಂತ ರಮಾಕಾಂತ ಗುಂಡೆಚಾ (ಭೋಪಾಲ-ದ್ರುಪದ ಗಾಯನ), ಪಂ. ಅಖಿಲೇಶ ಗುಂಡೆಚಾ (ಭೂಪಾಲ – ಪಖವಾಜ) ಭಾಗವಹಿಸಲಿದ್ದಾರೆ ಎಂದು ಸಪ್ತಕ ಸಂಚಾಲಕ ಜಿ.ಎಸ್.ಹೆಗಡೆ ಹಾಗೂ ಆರ್ಟ್ ಮಂತ್ರಮ್ ಅಧ್ಯಕ್ಷ ರಾಜಿ ನಾರಾಯಣ ತಿಳಿಸಿದ್ದಾರೆ.

ಇದನ್ನೂ ಓದಿ | Raja Marga Column : ಗಾತಾ ರಹೇ ಮೇರಾ ದಿಲ್; ಲತಾ ಮಂಗೇಶ್ಕರ್ ಮಧುರ ಧ್ವನಿ ಎಂದೆಂದೂ ಅಮರ

Exit mobile version