Site icon Vistara News

M.L.A. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಮಂಗಳಾ ರಾಮಚಂದ್ರ ನಿಧನ

Mangala ramachandra

ಬೆಂಗಳೂರು: ನಗರದ ಶೈಕ್ಷಣಿಕ ವಲಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ನಿನ ಅಧ್ಯಕ್ಷೆಯಾಗಿದ್ದ ಮಂಗಳಾ ರಾಮಚಂದ್ರ (91) ಅವರು ಸೋಮವಾರ ನಿಧಣರಾಗಿದ್ದಾರೆ.

ಮಂಗಳಾ ಅವರು ಸಾಮಾಜಿಕ ಬದ್ಧತೆ ಮತ್ತು ಸಕಾರಾತ್ಮಕ ಪರಿವರ್ತನೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅವರಿಗೆ ಅಪಾರ ಕಳಕಳಿ ಇತ್ತು.

ಮಲ್ಲೇಶ್ವರದದಲ್ಲಿ ಎಂಎಲ್ಎ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಕಟ್ಟುವ ಮೂಲಕ ಅವರು ಬಡಾವಣೆಯಲ್ಲಿ ತಿಲಕಪ್ರಾಯ ಸಾಧನೆ ಮಾಡಿದ್ದರು. ಮಲ್ಲೇಶ್ವರದ ಸಾಯಿ ಮಂಡಲಿ ಅಧ್ಯಕ್ಷರಾಗಿಯೂ ಮಂಗಳಾ ಅವರು ಕಾರ್ಯನಿರ್ಹಿಸಿದ್ದರು. ಮೂವರು ಪುತ್ರರನ್ನು ಅಗಲಿದ್ದಾರೆ.

ಮಂಗಳಾ ರಾಮಚಂದ್ರ ಅವರ ನಿಧನಕ್ಕೆ ಕ್ಷೇತ್ರದ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನದಿಂದ ಸಮಾಜಮುಖಿ ವ್ಯಕ್ತಿ ಒಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಮಲ್ಲೇಶ್ವರದ 11ನೇ ಅಡ್ಡರಸ್ತೆಯಲ್ಲಿರುವ ಮೃತರ ಮನೆಗೆ ತೆರಳಿ ಸಚಿವರು ‌ಮಂಗಳಾ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ | ಪ್ರಾಮಾಣಿಕ ಪರಿಶ್ರಮವೊಂದೇ ಶಾಶ್ವತ ಯಶಸ್ಸಿನ ಮಾರ್ಗ: ಹರಿಪ್ರಕಾಶ್ ಕೋಣೆಮನೆ

Exit mobile version